Thursday 10 June 2021

ಹರಿಯೇ ಸಿರಿದೊರೆಯೆ ಅರಿಯೆ ನಿನ್ಹೊರತನ್ಯರ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 


ಹರಿಯೆ ಸಿರಿದೊರೆಯೆ

ಅರಿಯೆ ನಿನ್ಹೊರತನ್ಯರ  


ಶರಣರ ಪೊರೆವ ಕರುಣಿ ನೀನೆ ದೇವ

ಮೊರೆ ಹೊಕ್ಕಿರುವರ ದುರಿತಗಳ ಕಳೆವ  ಅ.ಪ


ಕೋಟಿ ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ

ನಾಟಕಾಧಾರ ಶ್ರೀಶ

ಸಾಟಿಯಿಲ್ಲ ನಿನಗೆ ಸುರ ನರೋರಗರೊಳಗೆ

ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ 

1

ಬರಿದೆ ಈ ಸಂಸಾರ ಶರಧಿಯೊಳ್ ಮುಳುಗುತ

ಧರೆಯ ಕಾಣದೆ ಕೂಗುತ

ಮರಳಿ ಮರಳಿ ಜನನ ಮರಣಗಳೈದುತ

ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ 

2

ಹಟದಿ ದುರ್ಮತಿಗಳಾರ್ಭಟಿಸುತಅಜ್ಞಾನದಿ

ಮಟ ಮಾಯದಿ ಚರಿಸಿ

ತ್ರುಟಿಯಾದರು ನಿನ್ನ ಭಜಿಪ ಜನರಿಗೆ

ಘಟಿಪುದೇ ಗುರುರಾಮವಿಠಲ ನಿನ್ನಯ ಕರುಣ 

3

***


No comments:

Post a Comment