Saturday 1 May 2021

ಏಳಯ್ಯ ಗುರುವೇ ಬೆಳಗಾಯಿತು ankita varada vittala gurujagannatha dasa stutih

" ಶ್ರೀ ವರದವಿಠ್ಠಲರು "....

ಉದಯರಾಗ ತಾಳ : ಝ೦ಪೆ


ಏಳಯ್ಯ ಗುರುವೇ ಬೆಳಗಾಯಿತು ।

ಏಳು ಶ್ರೀ ಗುರು ಜಗನ್ನಾಥದಾಸಾರ್ಯ ।। ಪಲ್ಲವಿ ।।


ಪರಮ ಭಾಗವತವನು ಅತಿ ।

ವಿರಳದಲಿ ತಿಳಿಸಬೇಕು ।

ಶಾಸ್ತ್ರಾರ್ಥಗಳ ನಿಜ ಮರ್ಮವ । ವಿಶದೀ ।

ಕರಿಸಲೀಬೇಕು ।।

ಹರಿಕಥಾಮೃತಸಾರಕೆ ।

ಪರಿಮಳ ರಚಿಸಬೇಕು ।

ಪರತರ ಪದ್ಯ ಸುಳಾದಿಗಳ ।

ವಿರಚಿಸಲಿಬೇಕು ।। ಚರಣ ।।


ಗುರುಗುಣಸ್ತವನವನು ರಚಿಸಿ ಪಾಡಲುಬೇಕು ।

ವರ ಅಪ್ಪಣ್ಣಾರ್ಯರಾಗಿ ।

ಗುರುಗಳೊಂದಿಗೆ ಮಾತನಾಡಲುಬೇಕು ಬೆನಕಪ್ಪರಾಗಿ ।

ಹರಿಕಥಾಮೃತಸಾರಕೆ । ಫಲಶ್ರುತಿ ।।

ಯ ರಚಿಸಬೇಕು ಶ್ರೀದವಿಠಲರಾಗಿ ।

ಗುರುಗಳ ಇರುವನ್ನು ತೋರಿಸಲಿಬೇಕು ।

ಗುರು ಜಗನ್ನಾಥದಾಸಾರ್ಯರಾಗಿ ।। ಚರಣ ।।


ಘೋರತರ ಸಂಸಾರ ಸಾಗರದಲಿ ।

ದಾರಿ ಕಾಣದೇ ಬಳಲಿ ಬೆಂಡಾಗಿ ನಿಂತಿಹನೋ ।

ಪರಮ ಕರುಣಾಕರನಾದ ವರದವಿಠ್ಠಲನ ದಾಸ ।

ಕೈಪಿಡಿದು ಉದ್ಧರಿಸಲು ಬೇಗನೇ ಏಳು ।। ಚರಣ ।।

*****

No comments:

Post a Comment