Saturday 1 May 2021

ಜಯಾಪತಿ ವಿಠಲಾ ಕರುಣಿಸು ಎನ್ನಯ ankita uragadrivasa vittala jayapati vittala stutih

 " ಶ್ರೀ ಟಿ ಆರ್ ಶ್ರೀನಿವಾಸಮೂರ್ತಿ ( ಶ್ರೀ ಜಯಾಪತಿ ವಿಠ್ಠಲರಿಗೆ ) ನೀಡಿದ ಅಂಕಿತ ಪದ " by uragadri vasa vittala


ಜಯಾಪತಿ ವಿಠಲಾ 

ಕರುಣಿಸು ಎನ್ನಯ ।

ತೋಯಜ ಪದ 

ದಾಸನೆಂದೆನಿಸೋ ।। ಪಲ್ಲವಿ ।।


ಕರಣ ಶುದ್ಧಿಯನಿತ್ತು 

ಹರಿ ಗುರು ಸೇವೆಯ ।

ನಿರುತ ಕ್ರಿಯೆಗಳಲ್ಲಿ 

ನಿರ್ಮಮತೆಯಿತ್ತು ।। ಚರಣ ।।


ಸ್ವೋಚಿತ ಕಾರ್ಯದಿ 

ಸನ್ಮನವನಿತ್ತು ।

ಕೀಚಕಾರಿಪ್ರಿಯ ನಿನ್ನ 

ಭಕ್ತನೆಂದೆನಿಸಯ್ಯ ।। ಚರಣ ।।


ಉರಗಾದ್ರಿ ವಾಸ ವಿಠ್ಠಲ 

ನಿನ್ನವರ ।

ಪೊರೆದಂತೆ ಪೊರೆವುದು 

ಶರಣರ ಮಂದಾರ ।। ಚರಣ ।।

***


No comments:

Post a Comment