Saturday 1 May 2021

ಶ್ರೀಕಾಂತ ವಿಠಲ ತವ ಸೇವಕನಾಡಿವನ ankita uragadrivasa vittala srikanta vittala dasa stutih

 " ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಗಳಿಗೆ ನೀಡಿದ ಅಂಕಿತ ಪದ " by uragadrivasa vittala. [ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಯವರು  -  ಶ್ರೀಮತಿ ಸರಸ್ವತೀ ವಟ್ಟಂ ಅಕ್ಕನವರ ಮಾವಂದಿರು ]


ಶ್ರೀಕಾಂತ ವಿಠಲ ತವ -

ಸೇವಕನಾಡಿವನ ।

ನೀ ಕಾಪಾಡಿ ಸಲಹೋ 

ಸನ್ಮತಿಯನಿತ್ತು ।। ಪಲ್ಲವಿ ।।

ವಾಕು ಲಾಲಿಸು ಈ ಬಾಲ 

ನಿನ್ನವನೆಂದು । ನಿ ।

ರಾಕರಿಸದೆ ನಿನ್ನ ಭಕುತಿ ।

ಭಾಗ್ಯವನಿತ್ತು ।। ಅ ಪ ।।

ಆಯುರಾರೋಗ್ಯ 

ಸದ್ವಿದ್ಯ । ವಾ ।

ಕ್ಕಾಯ ಮನದ ಧ್ಯಾನ 

ವೃದ್ಧಿಗೈಸಿ ।

ವಾಯು ಮತಾಗಮ -

ತತ್ತ್ವದಾಯವ ತಿಳಿಸು ।

ಜೀಯ ನಿನ್ನ ಸೇವೆಯ-

ನಿತ್ತು ಕಾಯೋ ।। ಚರಣ ।।

ಮಾತಾ ಪಿತೃ ಭ್ರಾತೃ 

ಬಂಧು ಭಾಗನಿಹರಲ್ಲಿಹ । ಶ್ರೀ ।

ಪತಿ ವಿಭೂತಿಗಳ ನೆನೆದು ।

ಜಿತ ಮನದಿ ಪ್ರೀತಿ -

ವಿಶ್ವಾಸದಲಿ ।

ಸತತ ಶ್ರೀ ಹರಿ ನಿನ್ನ 

ಬಿಂಬ ಕ್ರಿಯೆಗಳನೆ 

ಅರುಹೋ ।। ಚರಣ ।।

ಪರ ಭಾಷೆ ಪರ ಸೇವೆ 

ಪರಮಾರ್ಥ ಪರವಾಗಿ ।

ಪರಿ ಪರಿಯಲಿ 

ವೃದ್ಧಿಯಾಗುತ್ತ ।

ಸುರರೊಡೆಯ ಉರಗಾದ್ರಿ -

ವಾಸ ವಿಠಲಾಭಿನ್ನ ।

ಶ್ರೀಕಾಂತ ವಿಠಲನ 

ಹೃತ್ಪಂಕಜದಿ 

ತೋರೋ ।। ಚರಣ ।।

***

No comments:

Post a Comment