Tuesday, 13 April 2021

ಕರುಣಾಬ್ಧೆ ಶ್ರೀ ನಾರಸಿಂಹ ankita gururama vittala

ಕರುಣಾಬ್ಧೆ ಶ್ರೀ ನಾರಸಿಂಹ ll ಪ ll


ಶರಣಾಗತಜನರ ಪೊರೆವೊ ಕೃಪಾಳು ll ಅ ಪ ll


ತರಳನ ಮಾತನು ಸಲಿಸುವುದಕೆ ಕಂಬ

ಬಿರಿದು ಅವತಾರಗೈದೆ ll 1 ll


ಕ್ಷೇಮವುಂಟಾದುದು ಶ್ರಮವೆಲ್ಲ ಪೋದುದು

ಭೂಮಿ ಭಾರವಿಳಿದುದು ll 2 ll


ಜಯ ಭಕ್ತವತ್ಸಲ ಜಯಜಗತ್ಪಾಲ 

ಜಯ ಜಯ ಜಯ ಶ್ರೀ ಗುರುರಾಮವಿಟ್ಠಲ ll 3 ll

***


No comments:

Post a Comment