Monday, 12 April 2021

ಆರಾರು ಎರಡು ಸಾವಿರ ದಾರಿಯಲಿ ankita gopala vittala mundige

 ಶ್ರೀ ಗೋಪಾಲದಾಸರ ಮುಂಡಿಗೆಗಳು.


ಆರಾರು ಎರಡು ಸಾವಿರ ದಾರಿಯಲಿ ಹೋಗಿ ಬರುವರು lಆರು ಮೂರು ಮೂರು ಸಾವಿರದ ಆರುನೂರು ನಿತ್ಯದಿ l

ಆರು ನಾಲ್ಕು ಮಂದಿ ಹಿರಿಯ ಪಾರುಪತ್ಯಗಾರರಿದಕೆ  l ಆರು ಎರಡು ವಿಧದಲೆನ್ನ ಗಾರುಮಾಡುತಿಪ್ಪರೋ l l

***


ಗೋಪಾಲ ದಾಸರ ಬಗ್ಗೆ ಏನು ಹೇಳೋದು.

ವಿಷಯ ಬೇಕಾದಷ್ಟಿದೆ. ನಿಮಗೆ ಓದಲು ಸಮಯಬೇಕು.

ಅವರ ಕೆಲವು ಕೃತಿಗಳು ವೈರಾಗ್ಯದ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಈಗ ನೋಡಿ.. ಆಯಾಸವ ಪಡದೆ ಪರರ ಶ್ರೇಯಸ ನೋಡಿ l ಶ್ರೀಯರಸ ನಿತ್ತನೆಂಬುದೆ ವೈರಾಗ್ಯ l ಪ್ರೀಯದಿ ನೀನಿತ್ತ ಕರ್ತೃತ್ವವು ಎನಗೆ l ನೀ ನಿನ್ನಲ್ಲದೆ ಎನ್ನಿಂದಾಗದು ಎನುತಲಿ l ನೋಯದೆ ಇಪ್ಪುದೆ ವೈರಾಗ್ಯ l  ಹೀಗೆ ವೈರಾಗ್ಯದ ನಿಜ ಅರ್ಥ ಹೇಳಿದ್ದಾರೆ l 


ಈಗ ಮುಂಡಿಗೆ ಆರ್ಥ ನೋಡೋಣ..

ಈ ದೇಹವೆಂಬ ಗ್ರಾಮಕ್ಕೆ ದಾರಿಗಳು ಎಷ್ಟು  ಎಂದರೆ  ಆರಾರು ಎರಡು ಸಾವಿರ ದಾರಿಯಲಿ  ಹೋಗಿ ಬರುವರು .. 6x6= 36x2 =72000 ನಾಡಿಗಳಲ್ಲಿ ಸಂಚರಿಸುವರು ವಾಯುದೇವರು . . ಅಂತರಂಗದ ಉಸಿರ ಹೊರಗೆ ಬಿಟ್ಟು ಅಂತರಂಗಕ್ಕೆ ಸೇರಿಸುವ .. ಕಾರ್ಯವ ಮಾಡುವರು .  

ಆರು ಮೂರು ಮೂರು ಸಾವಿರದ ಆರುನೂರು 

ನಿತ್ಯದಿ .. ಎಂದರೆ... 

6x3 =18+3 = 21000+6000=21600

ಶ್ವಾಸ ಮಂತ್ರ ಜಪವನ್ನು ಪ್ರತಿ ಜೀವಿಯಿಂದ ವಾಯುದೇವರು ನಿತ್ಯ ಮಾಡಿಸುತ್ತಿದ್ದಾರೆ.


ಆರು ನಾಲ್ಕು ಮಂದಿ ಪಾರುಪತ್ಯ 

ಗಾರರಿದಕೆ ..  6x4=24 ಮಂದಿ ತತ್ವಾಭಿಮಾನಿ ದೇವತೆಗಳು , ಪಂಚ ಭೂತಗಳು , ಪಂಚ ತನ್ಮಾತ್ರ , ಪಂಚ ಕರ್ಮೆಂದ್ರಿಯ, ಪಂಚ ಜ್ಞಾನಂದ್ರಿಯಗಳು , ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ . 


ಆಮೇಲೆ ಆರು ಎರಡು ವಿಧದಲೆನ್ನ ಗಾರು ಮಾಡು ತಿಪ್ಪರೋ .. 6+2=8  ಅಂದರೆ ಅಷ್ಟ ಮದಗಳು ಅನ್ನ ಮದ, ಆರ್ಥ ಮದ, ಮುನ್ನ ಪ್ರಾಯದ ಮದ, ತನಗಿದಿರಿಲ್ಲ ವೆಂಬುದ ಮದ, ಕುಲ ಮದ, ವಿಧ್ಯಾ ಮದ, ಧನ ಮದ . ಅಬ್ಬಾ ಎಸ್ಟು ಇದೆಯಲ್ರಿ . ಅದಕ್ಕೆ ದಾಸರು ಇಷ್ಟು  ಅಹಂಕಾರದ ಮದಗಳು ನನ್ನಲ್ಲಿ ಸೇರಿಕೊಂಡು ಹಾಳಗು ತಿದ್ದೇನೆ. ಇದೆನ್ನಲ್ಲ ಹೋಗಲಾಡಿಸಿ ಸಾಧನೆಯನ್ನು ಮಾಡಿಸೋ ಸ್ವಾಮಿ ಎಂದು ಪ್ರಾರ್ಥಿಸಿದ್ದಾರೆ.  


ಗೋಪಾಲ ದಾಸರು ನಮ್ಮ ಪರವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ದಾಸರುಗಳು ಹೇಳಿದ್ದೆಲ್ಲ ನಮಗೆ . ಅವರಿಗೆ ಅಂತ ಯಾವತ್ತೂ ಅರ್ತ ಮಾಡಬಾರದು. 

ಒಂದು ಮದ ಸೇರಿದರೆ ನಮಗೆ ಸಾಕು ನಮ್ಮ ವಂಶವನ್ನೆ ಗುಡಿಗುಂಡಾರ ಮಾಡುತ್ತವೆ . ಇನ್ನು ಇವೆಲ್ಲ ಸೇರಿದರೆ ಗತಿಯೇನು. ಬೇಡರೀ ದ್ವೇಷ, ಅಸೂಯೆ, ವೈರತ್ವ . ಇಷ್ಟು ದಿನ ಆದದ್ದಾಯಿತು . ಹೋಗಲಿ ಬಿಡಿ. ಇನ್ನು ಮುಂದೆ ಆದರೂ ಕೆಲವನ್ನಾದರೂ ಬಿಡಲು ಪ್ರಯತ್ನ ಮಾಡೋಣ. ಇದರಲ್ಲಿ ಒಂದು ಸೇರಿದರೆ ಸಾಕು.  ನಾವು ಮಾಡಿದ ಭಗವತಾ ಕರ್ಮಗಳು ಒಡೆದ ಮಡಕೆಯಂತೆ ಎಲ್ಲ ಸೋರಿ ಹೋಗುತ್ತೆ. ಬಿಡಲು ಸುಲಭ ಅಲ್ಲ. ಇಷ್ಟು ದಿನ ಕೆಟ್ಟ ಮದಗಳನ್ನು ಚೆನ್ನಾಗಿ ಸಾಕಿ ಕೊಂಡು ಬಂದಿದ್ದೇವೆ. ನನ್ನೋ ಸೇರಿಸಿ ಹೇಳುತ್ತಿ ದ್ದೇನೆ. ಅನಾವಶ್ಯಕ ಲೌಕಿಕ ವಿಚಾರ , ಮಠ ಮಠಗಳ ವಿಚಾರ ಇವುಗಳಿಂದ ನಮ್ಮ ಮನಸ್ಸು ಮೈಲಿಗೆ ಆಗುತ್ತೆ.   ದೊಡ್ಡವರು , ಪಂಡಿತರು ಇದ್ದಾರೆ ಅದರ ವಿಷಯ ಗಳಿಗೆ. ಸೂಕ್ತವಾದ ಉತ್ತರ ಹೇಳುತ್ತಾರೆ .ಇದರಿಂದ ನಾವು ಮಾಡಿದ ಸಾಧನೆ ಏನು? Big zero...  ಬೇಡದ ವಿಷಯಗಳ ತಲೆಯಲ್ಲಿ ತುಂಬಿ ಕೊಂಡರೆ ಇನ್ನು ದಾಸರ ಕೀರ್ತನೆಗಳು, ಉಗಾಭೋಗ , ಮುಂಡಿಗೆಗೆ ಜಾಗವೆಲ್ಲಿ. ಪರಿವರ್ತನೆ ಆಗಲಿ ಮನಸುಗಳು , ಮನಗಳು , ಮನೆಗಳು.ಎಲ್ಲರೂ ಒಟ್ಟಿಗೆ ಸೇರಿ ಭಗವಂತನ ಪ್ರಾರ್ಥಿಸೋಣ ಒಳ್ಳೆ ಬುದ್ದಿ ಕೊಡೋ ಮಹರಾಯ ಅಂತ..

***


No comments:

Post a Comment