Monday 9 December 2019

ತಾಯಿ ಎಂಬೆನೆ ನಿನ್ನ shree krishna ankita suladi ದೃಢಭಕ್ತಿ ಸುಳಾದಿ TAAYI EMBENE NINNA DHRUDABHAKTI SULADI

Audio by Mrs. Nandini Sripad

ಶ್ರೀ ವ್ಯಾಸರಾಜ ವಿರಚಿತ    ದೃಢಭಕ್ತಿ ಸುಳಾದಿ 

 ರಾಗ ಸಾವೇರಿ 

 ಧ್ರುವತಾಳ 

ತಾಯಿ ಎಂಬೆನೆ ನಿನ್ನ , ಧ್ರುವನ 
ತಾಯಿ ನಿನ್ನಂತೆ ಕಾಯ್ದಳೆ
ತಂದೆ ಎಂಬೆನೆ ನಿನ್ನ , ಪ್ರಹ್ಲಾದನ 
ತಂದೆ ನಿನ್ನಂತೆ ಕಾಯ್ದನೆ
ಭ್ರಾತೃ ಎಂಬೆನೆ ನಿನ್ನ , ವಿಭೀಷಣನ 
ಭ್ರಾತೃ ನಿನ್ನಂತೆ ಕಾಯ್ದನೆ
ಭರ್ತೃ ಎಂಬೆನೆ ನಿನ್ನ , ಪಾಂಚಾಲಿಯ 
ಭರ್ತರು ನಿನ್ನಂತೆ ಕಾಯ್ದರೆ
ಪುತ್ರನೆಂಬೆನೆ ನಿನ್ನ , ಉಗ್ರಸೇನನ 
ಪುತ್ರ ನಿನ್ನಂತೆ ಕಾಯ್ದನೆ
ಮಿತ್ರನೆಂಬೆನೆ ನಿನ್ನ , ಗಜೇಂದ್ರನ 
ಮಿತ್ರರು ನಿನ್ನಂತೆ ಕಾದರೆ
ಆವ ಅನಿಮಿತ್ತ ಬಂಧುವೊ ಮೇ -
ಣಾವ ನೀನಾವ ಕರುಣಾಸಿಂಧುವೋ
ಸಿರಿಪತಿ ಸಿರಿಕೃಷ್ಣ ನಿನ್ನ ಭಕುತರಲಿ 
ನೆಂಟತನ ಹೊಸಪರಿಯಾಯಿತಯ್ಯಾ ॥ 1 ॥

 ಮಠ್ಯತಾಳ 

ದಾನಿಗಳರಸಂಗೆ ದೈನ್ಯ ಬಲಿ
ಲಕ್ಷುಮಿಪತಿಗೈದೆ ಯಜ್ಞ ಭಿಕ್ಷತೆ ತಿರುಪೆ
ಕೈವಲ್ಯಪತಿಗೆ ದಾವಿನ ಬಂಧನ
ಲೋಕ ಗುರುವಿಂಗೆ ಪೊಕ್ಕಾಟವೆ ಗೋಪೆರಲ್ಲಿ
ಈಸು ವಿನೋದವು ನಿನ್ನ ಭಕುತರಿಗಾಗಿಯೇ
ಶ್ರೀಪತಿ ಸಿರಿಕೃಷ್ಣ ನಿನ್ನ ದಾಸರಿಗಾಗಿಯೇ ॥ 2 ॥

 ರೂಪಕತಾಳ 

ಹಿಂದೆ ಪೊಂಗೊಳಲೂದೊಂದೊಂದು 
ಧಂದಾ ಗೋಪಾಲ ಮೂರುತಿಯೆ ಎಂದು
ಒಂದು ಬಾರೆ ನೆನೆದ ಕುಬುಜಿಗೆ ಮುಕುತಿಯ -
ನಿತ್ತಂದಡೆ ನಾ ನಿನ್ನ ನೆನವುದ ಬಿಡೆ
 ಶ್ರೀ ಕೃಷ್ಣ ಎಂದೆಂದಿಗೂ ಬಿಡೆ ॥ 3 ॥

 ಝಂಪೆತಾಳ 

ಆಳು ನಾ ನಿನ್ನಾಳು ನಿನ್ನಾಳು ನಾನು 
ನೀನು ತಂದೆ ನಿನ್ನ ಕಂದ ನಾನು
ಶರಣ್ಯ ನಾ ನಿನ್ನ ಶರಣಾಗತ ನಾನು
ಓವ ನೋವಿತ್ತಿಂತು ಕಾವರ್ಯಾರಿನ್ನು
ಶ್ರೀಪತಿ ಸಿರಿಕೃಷ್ಣ ನೀ ಎನ್ನ ಸಲಹಬಹುದೊ ॥ 4 ॥

 ತ್ರಿಪುಟತಾಳ 

ಕಂಸಾರಿ ಎಂದು ಸಂಸಾರ ದಾಟುವೆನೊ
ಸಿರಿಪತಿ ಎಂದು ಪಾಪಂಗಳಟ್ಟುವೆನೊ
ಕಂಜನಾಭ ಎಂದಂಜಿಸುವೆ ಜವನವರ
ಸಿರಿಪತಿ ಸಿರಿಕೃಷ್ಣ ನಿನ್ನ ದಾಸರ ದಾಸ ನಾನು ॥ 5 ॥

 ಅಟ್ಟತಾಳ 

ಹಿಂದೆ ಅಸುರರ ಬಲಿದೆ ಬಳಲಿಸಿದೆ
ವೃಂದಾರಕರಿಂಗೆಲ್ಲ ನೀ ಸುಧಿಯನೆರದೆ
ಆವಾವ ಪರಿಯಲ್ಲಿ ಅಸುರರ ಬಳಲಿಸಿದೆ
ದೇವರೆಲ್ಲರ ನೋವೆ ಕಾಯ್ದೆ
ಆಗಮೋಕ್ತದ ದೇವಂಗಳಿಗೆಲ್ಲ ನೀನೊಬ್ಬನೆ 
ತೆತ್ತಿಗನಲ್ಲವೆ ಶ್ರೀಕೃಷ್ಣ ಆವಾಗ ॥ 6 ॥

 ಏಕತಾಳ 

ಆವಾ ಕಾಲದಲಿ ಆವ ದೇಶದಲಿ
 ಶ್ರೀಕೃಷ್ಣ ಕಾವಂತೆ
ಬಂಧು ಜನ ಕಾಯ ಬಲ್ಲುದೆ
ಸಿರಿಪತಿ ಸಿರಿಕೃಷ್ಣ ಆವಾವ ಕಾಲದಲಿ ॥ 7 ॥

 ಜತೆ 

ಅನಿಮಿತ್ತ ಬಂಧು ಈ ನಮ್ಮ ಶ್ರೀಕೃಷ್ಣ 
ಎಂದೆಂದಿಗೂ ಶತ್ರು ಅಸುರರಿಗೆ ॥
**********

No comments:

Post a Comment