Wednesday 8 December 2021

ಏನಾಯಿತೀ ಜನಕೆ ಮೌನವದು ಕವಿದಂತೆ purandara vittala ENAAYITEE JANAKE MAUNAVADU KAVIDANTE



ಪುರಂದರದಾಸರು
ಏನಾಯಿತೀ ಜನಕೆ ಮೌನವದು ಕವಿದಂತೆ |
ಮಾನುಷ್ಯರಾಗಿ ಮರೆತರು ಹರಿಯನು ಪ.

ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |ಮೇಲಿನ ತುಟಿ ಎರಡು ಒಂದಾಯಿತೇ -ಅವರ - |ಕಾಲಮೃತ್ಯು ಬಂದು ಕಂಗೆಡಿಸಿತೆ ? 1

ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||ಹಟ ಹಿಡಿದ ಹೊಲೆಮನಸುಹರಿ ಎನ್ನಲಾರದೆ |ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2

ಹರಿಯೆಂದರವರ ಶಿರ ಹರಿದು ಬೀಳುವುದೆ |ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3
***

pallavi

EnAyitO I janake maunavanu hiDidu maretaru hariya

caraNam 1

nAlige muridito neggina kone muLLu bAlakatanadali bhUta hiDiyido
mEle kaugina tuTi eraDu ondAyito kAla mrtyuvu bandu gangeDisido

caraNam 2

ghaTa sarpa kacci viSa ghanavAgi EritO kaTakarisi nAlige kaDidhOyitO
haTadalli hariyannu neneyade iruvantha kuTila cancala manasu kUDi bAdhisito

caraNam 3

hariyendarivara shira haridu tA bILuvude harinAma haNeyalli baredillave
varada purandara viTTalarAyanna smarisidare siDileragi kolluvude
***

ರಾಗ ಬಿಲಹರಿ. ಅಟ ತಾಳ (raga, taala may differ in audio)

ಏನಾಯಿತೋ ಈ ಜನಕೆ
ಮೌನವನು ಹಿಡಿದು ಮರೆತರು ಹರಿಯ ||ಪ||

ನಾಲಿಗೆ ಮುರಿದಿತೊ ನೆಗ್ಗಿಲ ಕೊನೆಮುಳ್ಳು
ಬಾಲಕತನದಲಿ ಭೂತ ಹಿಡಿಯಿತೊ
ಮೇಲೆ ಕೆಳಗಿನ ತುಟಿ ಎರಡು ಒಂದಾಯಿತೊ
ಕಾಲ ಮೃತ್ಯುವು ಬಂದು ಕಂಗೆಡಿಸಿತೊ ||

ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ
ಕಟಕರಿಸಿ ನಾಲಿಗೆ ಕಡಿದ್ಹೋಯಿತೋ
ಹಟದಲ್ಲಿ ಹರಿಯನ್ನು ನೆನೆಯದೆ ಇರುವಂಥ
ಕುಟಿಲ ಚಂಚಲ ಮನಸು ಕೂಡಿ ಬಾಧಿಸಿತೊ ||

ಹರಿಯೆಂದರಿವರ ಶಿರ ಹರಿದು ತಾ ಬೀಳುವುದೆ
ಹರಿನಾಮ ಹಣೆಯಲ್ಲಿ ಬರೆದಿಲ್ಲವೆ
ವರದ ಪುರಂದರವಿಠಲರಾಯನ್ನ
ಸ್ಮರಿಸಿದರೆ ಸಿಡಿಲೆರಗಿ ಕೊಲ್ಲುವುದೆ ||
*********


No comments:

Post a Comment