ಪುರಂದರದಾಸರು
ಜಯ ಪಾಂಡುರಂಗ ನಾ ನಿನ್ನ ಮನಕೆ ಬಾರೆನೆ ll ಪ ll
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದ
ಬಲೆಯೊಳು ಸಿಲುಕುವೆನೆ ಜಯ ಪಾಂಡುರಂಗ ll ಅ ಪ ll
ಕೆಟ್ಟ ಕಿರಾತನ ಬೆಟ್ಟದಂಥ ಪಾಪವ
ಸುಟ್ಟು ವಾಲ್ಮೀಕಿ ಮುನಿಯೆನಿಸಿದೆ ll 1 ll
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆ
ಅಂತಕನ ಬಾಧೆಯ ಬಿಡಿಸಿದೆಯೊ ll 2 ll
ತಂದೆ ತಾಯ್ಗಳನು ತೊರೆದ ಧ್ರುವನಿಗೆ
ಚೆಂದದಿಂದ ಮಾರ್ಗವ ತೋರಿದೆಯೊ ll 3 ll
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿ
ಶಂಕೆಯಿಲ್ಲದೆ ಅವಳ ಕೂಡಿದೆಯೊ ll 4 ll
ತೊತ್ತಿನ ಮಗನ ಮನೆಯಕುಡಿತೆ ಪಾಲನು ಸವಿದು
ಮತ್ತವಗೆ ಮುಕ್ತಿಯ ತೋರಿದೆಯೊ ll 5 ll
ಐದು ಮಂದಿಯ ಕೂಡ ಸರಸವು ದ್ರೌಪದಿಗೆ
ಐದೆ ಲಜ್ಜೆಯ ಕಾಯ್ದೆಯೊ ll 6 ll
ದೀನರನುದ್ಧರಿಪ ಪುರಂದರವಿಟ್ಠಲ
ಏನು ಕಾರಣ ನನ್ನ ಮರೆತೆಯೊ ll 7 ll
***
pallavi
jaya pANDuranga nA ninna manake bArene
anupallavi
nA ninna manake bArane bandare I bhAvada baleyoLu silukuvena jaya pANDuranga
caraNam 1
keTTa kirAtana beTTadanta pApava suTTu vAlmIki muniyeniside
caraNam 2
antya samayadalli ati bhraSTa ajAmiLake antakana bAdeya biDisideyo
caraNam 3
tande tAigaLanu toreda druvanige cendadinda mArgava tOrideyo
caraNam 4
pankaja nAbhane kubujeya Donka tiddi shankeyillade avaLa kUDideyo
caraNam 5
tottina magana maneya kuDide pAlanu savidu mattavage muktiya tOrideyo
caraNam 6
aidu mandiya kUDa sarasavu draupadige aide lajjeya kAideyo
caraNam 7
dInaranuddhariya purandara viTTala Enu kAraNa nanna maredeyo
***
ಜಯ ಪಾಂಡುರಂಗ ನಾ ನಿನ್ನ ಮನಕೆ ಬಾರೆನೆ ಪ
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದಬಲೆಯೊಳು ಸಿಲುಕುವೆನೆ - ಜಯ ಪಾಂಡುರಂಗ ಅ.ಪ
ಕೆಟ್ಟ ಕಿರಾತನ ಬೆಟ್ಟದಂಥ ಪಾಪವಸುಟ್ಟು ವಾಲ್ಮೀಕಿ ಮುನಿಯೆನಿಸಿದೆ 1
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆಅಂತಕನ ಬಾಧೆಯ ಬಿಡಿಸಿದೆಯೊ 2
ತಂದೆ ತಾಯ್ಗಳನು ತೊರೆದ ಧ್ರುವನಿಗೆಚೆಂದದಿಂದ ಮಾರ್ಗವ ತೋರಿದೆಯೊ 3
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿಶಂಕೆಯಿಲ್ಲದೆ ಅವಳ ಕೂಡಿದೆಯೊ 4
ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದುಮತ್ತವಗೆ ಮುಕ್ತಿಯ ತೋರಿದೆಯೊ 5
ಐದು ಮಂದಿಯ ಕೂಡ ಸರಸವು ದ್ರೌಪದಿಗೆಐದೆಲಜ್ಜೆಯ ಕಾಯ್ದೆಯೊ6
ದೀನರನುದ್ಧರಿಪಪುರಂದರವಿಠಲಏನು ಕಾರಣ ನನ್ನ ಮರೆತೆಯೊ 7
***
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದಬಲೆಯೊಳು ಸಿಲುಕುವೆನೆ - ಜಯ ಪಾಂಡುರಂಗ ಅ.ಪ
ಕೆಟ್ಟ ಕಿರಾತನ ಬೆಟ್ಟದಂಥ ಪಾಪವಸುಟ್ಟು ವಾಲ್ಮೀಕಿ ಮುನಿಯೆನಿಸಿದೆ 1
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆಅಂತಕನ ಬಾಧೆಯ ಬಿಡಿಸಿದೆಯೊ 2
ತಂದೆ ತಾಯ್ಗಳನು ತೊರೆದ ಧ್ರುವನಿಗೆಚೆಂದದಿಂದ ಮಾರ್ಗವ ತೋರಿದೆಯೊ 3
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿಶಂಕೆಯಿಲ್ಲದೆ ಅವಳ ಕೂಡಿದೆಯೊ 4
ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದುಮತ್ತವಗೆ ಮುಕ್ತಿಯ ತೋರಿದೆಯೊ 5
ಐದು ಮಂದಿಯ ಕೂಡ ಸರಸವು ದ್ರೌಪದಿಗೆಐದೆಲಜ್ಜೆಯ ಕಾಯ್ದೆಯೊ6
ದೀನರನುದ್ಧರಿಪಪುರಂದರವಿಠಲಏನು ಕಾರಣ ನನ್ನ ಮರೆತೆಯೊ 7
***
No comments:
Post a Comment