Wednesday 4 December 2019

ಕರುಣಿಸಿ ಕೇಳು ಕಂದನ ಮಾತನು purandara vittala KARUNISI KELU KANDANA MAATANU


ಪುರಂದರದಾಸರು
ರಾಗ ಆನಂದಭೈರವಿ ಅಟತಾಳ 

ಕರುಣಿಸಿ ಕೇಳೊ ಕಂದನ ಮಾತನು ||ಪ||

ಗರುಡವಾಹನನೆ ಗಂಗೆಯ ಪೆತ್ತ ಶ್ರೀ ಹರಿಯೆ ||ಅ||

ಇತ್ತ ಬಾರೆಂಬರಿಲ್ಲ , ಯಾರು ಕೇಳುವರಿಲ್ಲ
ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ
ತತ್ತರಗೊಳುತೇನೆ ತಾವರೆಲೆನೀರಂತೆ
ಚಿತ್ತ ಭ್ರಮಿಸಿ ಕಣ್ಣು ಕತ್ತಲಾಯಿತು ಹರಿಯೆ ||

ಇಂದುಂಬಶನವಿಲ್ಲ , ಇರವ ಕೇಳುವರಿಲ್ಲ
ಒಂದು ಸುತ್ತಿಗೆ ತುಂಡು ಅರಿವೆ ಇಲ್ಲ
ಬೆಂದೊಡಲಿಗೆ ಒಬ್ಬರಯ್ಯೊ ಎಂಬುವರಿಲ್ಲ
ಬಿಂದುಮಾತ್ರದಿ ಸುಖವ ನಾ ಕಾಣೆ ಹರಿಯೆ ||

ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿ
ಅಲ್ಲವ ತಿಂದಿಲಿಯಂತೆ ಬಲಲುವೆನೆ
ಫುಲ್ಲಲೋಚನ ಪೂರ್ಣದಯದಿ ಸಲಹೊ ಎನ್ನ
ಸಲ್ಲದ ನಾಣ್ಯವ ಮಾಡಿಬಿಡುವರೆ ಹರಿಯೆ ||

ನಖಕೇಶಪರಿಯಂತ ನಾನಾಭವದಿ ನೊಂದೆ
ಸುಖವ ಕಾಣೆನು ಬಿಂದುಮಾತ್ರದಲಿ
ಮುಖವರಿಯದ ರಾಜ್ಯದೊಳಗೆ ಎನ್ನನು ಬಿಟ್ಟು
ಬಕನಂತೆ ಮಾಳ್ಪುದುಚಿತವೆ ಶ್ರೀಹರಿಯೆ ||

ಇಷ್ಟು ದಿವಸ ನಿನ್ನ ನೆನೆಯದ ಕಾರಣ
ಕಷ್ಟಪಟ್ಟೆನು ಸ್ವಾಮಿ ಕಾಯೊ ಎನ್ನ
ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯ-
ವಿಟ್ಟು ಸಲಹೊ ಶ್ರೀಪುರಂದರವಿಠಲ ||
***

pallavi

karuNisi kELo kandana mAtanu

anupallavi

garuDa vAhanane gangeya petta shrI hariye

caraNam 1

itta bArembarilla yAru kELuvarilla hattira kuLLirisi Adariparilla
tattara koLutEne tAvarele nIrante citta bhramasi kaNNu kattalAyitu hariye

caraNam 2

indumbashanavilla irava kELuvarilla ondu suttige tuNDu ariveyilla
pondoDalige obbayyo embuvarilla bindu mAtradi sukhava nA kANe hariye

caraNam 3

elliddarenagondu neleyilla shrI hari allava tindiliyante baLaluvene
pullalOcana pUrNa dayadi salaho enna sallada nANyava mADi biDuvare hariye

caraNam 4

nakha kEsha pariyanta nAnA bhavadi nonde sukhava kANenu bindu mAtradali
mukhavariyada rAjyadoalage ennanu biTTu bakanante mALpudu citave shrI hariye

caraNam 5

iSTu divasa ninna neneyada kAraNa kaSTa paTTenu svAmi kAyo enna
muTTi bhajisilla muravairi nI dayaviTTu salaho purandara viTTala
***

ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇ ಪ

ಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1

ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2

ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3

ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4

ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
******

No comments:

Post a Comment