Friday 27 December 2019

ಗೋಕುಲರನ್ನ ಏಕೆನ್ನ ಕೈ ಬಿಡುವೆ others

ರಾಗ ಅಸಾವೇರಿ ಆದಿತಾಳ

ಗೋಕುಲರನ್ನ ಏಕೆನ್ನ ಕೈ ಬಿಡುವೆ ||ಪ||

ನಾನು ಮಾಡಿದ ಪಾಪ ನರಕಸಾಧನವಾಯ್ತು
ಏನು ಗತಿಯೊ ಎನಗೆ ಭಕ್ತರ ಕಾಮಧೇನು ಮಾಡುವುದೇನಯ್ಯ ಕೃಷ್ಣಯ್ಯ ಎನ್ನ
ಹೀನ ಬುದ್ಧಿಗಳನ್ನು ನೆನೆಯದೆ ಸ್ವಾನುಭವ ಗೋಷ್ಠಿಯಲಿ ಸೇರಿಸಿ
ಮೀನಕೇತನ ಜನಕ ಪಾಲಿಸೊ , ಮಾನ ಅಭಿಮಾನಗಳು ನಿನ್ನದು ||೧||

ಎಷ್ಟು ನಿಲ್ಲಿಸಿದರು ಕೆಟ್ಟ ಇಂದ್ರಿಯಗಳು
ತಟ್ಟನೆ ತಿರುಗುವವು ಭ್ರಷ್ಟನ ಚಿತ್ತ ಎಷ್ಟು ಹಿಡಿದರು ನಿಲ್ಲದು, ಕೃಷ್ಣಯ್ಯ ಎನ್ನ
ಕಷ್ಟವನು ನೀ ಮನಕೆ ತಂದು ಎನಗಿಷ್ಟವೆಂತಹುದು ಅಂತೆಗೈವುತ
ಭ್ರಷ್ಟತನವನು ತಿದ್ದಿ ನಿನ್ನುತ್ಕೃಷ್ಟ ಪದವನು ಸೇರಿಸೆನ್ನನು ||೨||

ವೈಕುಂಠನಗರೀಶ ಗೆದ್ದೆನೈ ಭವಪಾಶ
ಸಕ್ಕರೆ ಸಿಕ್ಕಿತಯ್ಯ ನಿನ್ನಯ ನಾಮ ಜಿಹ್ವೆಗೆ ದೊರೆವುದೆ ಕೃಷ್ಣಯ್ಯ ಎನ್ನ
ಅಕ್ಕರದಿಂದಲಿ ಪೊರೆದ ಮೇಲೆ ನಾನ್ ಟಕ್ಕು ಯಮನನು ಮಿಕ್ಕು ಮೀರುತ
ಅಕ್ಕಜವ ಮಾಡಿ ಇಂದ್ರಭೋಗವ ಘಕ್ಕನೆ ನಿನ್ನ ದಾಸನಾದೆನು ||೩||
*******

No comments:

Post a Comment