Friday 27 December 2019

ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ others

ರಾಗ ಮುಖಾರಿ ಝಂಪೆ ತಾಳ

ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ
ಕಂಸಾರಿ ಪಾದಭಜನೆಯ ಬಿಟ್ಟು ಬರಿದೆ||ಪ||

ಪಂಚ ಭೂತಾಂಶವೆಂಬ ದೇಹವಿದಕೆದ್ದಿ
ಪಂಚೇಂದ್ರಿಯಗಳ ವಿಷಯಗಳ ಸಹಿತಲು
ಪಂಚದ್ವಿಗುಣವು ಪರಣವಾಶ್ರಯದೊಳು ಕೂಡಿ
ಸಂಚರಿಸಿ ತೊಳಲುವುದಲ್ಲದೆ ಅನ್ಯವಿಹುದೆ ||೧||

ಅಷ್ಟರಾಗವು ಕರಣ ಅಷ್ಟವಿಷಯವು ಸಹಿತ
ಅಷ್ಟಕೊಂದನು ಕಡಮೆ ಧಾತುಗಳನು
ಶಿಷ್ಟನಾಡಿಯ ಮೂರು ದುಂಡೆಲು ಮೂರರಲಿ
ಚೇಷ್ಟಿಸುತ ಕೆಡುವುದಲ್ಲದೆ ಅನ್ಯವಿಹುದೆ ||೨||

ದೂಷಣ ತ್ರಿವಿಧ ಮತ್ತೀಷಣ ತ್ರಿವಿಧ ಗುಣ
ರಾಶಿ ತ್ರಿವಿಧಾವಸ್ಥೆಗಳನು ಮತ್ತೆ
ಈಷಣ*ತ್ರಯ ತಾಪಕೋಶಗಳನೈದಿದೀ
ನಾಶಿಸುವ ದೇಹವಲ್ಲದೆ ಬೇರಿರುದೆ ||೩||

ಮಾರುತ ಸಹಿತೊಂಬತ್ತಾರು ತತ್ವವು ಸಹಿತ
ತೋರುತ್ತಲಿಹ ಈ ಶರೀರದೊಳಗೆ
ಸಾರಾಂಶವಿದುವೆಂಬ ಸಾರಗಳನರಿತು ಸಂ-
ಸಾರ ಬಂಧನ ಬಿಟ್ಟು ಸ್ಥಿರ ಬಾಳು ಮನುಜ ||೪||

ಅಣುರೇಣು ತೃಣಕಾಷ್ಠ ಭರಿತನಾಗಿರುತಿರ್ಪ
ಚಿನುಮಯಾತ್ಮಕ ಭಕ್ತಜನ ರಕ್ಷಕ
ಅನುದಿನ ಸಲಹುವನು ಮನದಿ ಸ್ಮರಿಸಲು ಬಿಡದೆ
ಘನಮಹಿಮ ನಿತ್ಯಾತ್ಮ ಸಿರಿಯರಸ ನಮ್ಮ||೫||
********

No comments:

Post a Comment