Monday 9 December 2019

ತಸ್ಮಾತ್ ತ್ವಮುತ್ತಿಷ್ಠ guruvijaya vittala ankita suladi ಭಗವದ್ಗೀತಾ ಸುಳಾದಿ TASMAAT TWAMUTTISHTA BHAGAVAD GITA STOTRA SULADI

Audio by Mrs. Nandini Sripad

ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ 
 ( ಗುರುವಿಜಯವಿಠ್ಠಲ ಅಂಕಿತ ) 

 ಶ್ರೀಭಗವದ್ಗೀತಾ ಸ್ತೋತ್ರ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

" ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವಂ ರಾಜ್ಯಂ ಸಮೃದ್ಧಂ
ಮಯೈ ವೈತೇ ನಿಹತಾಃ ಪೂರ್ವಮೇವ 
ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ " (ಅ 11 ಶ್ಲೋ 33)
ಎನ್ನಿಂದ ಆದ ಕೃತ್ಯ ಅವಜ್ಞ ಮಾಡದಲೆ 
ಉತ್ತರವ ಪೇಳುವದು 
ಭಾವಾಭಿಜನ್ಯವಾದ ಅಹಂಕಾರವಾದರೂ 
ಶ್ರೀವರ ನಿನ್ನಿಂದೇ ಪುಟ್ಟಿತೆನಗೆ 
ಪಾವನ ಮಹಿಮ ಗುರುವಿಜಯವಿಠ್ಠಲರೇಯಾ 
ಆವಪರಾಧ ಉಂಟು ತಿಳಿಸಿ ಪೇಳೋ ॥ 1 ॥

 ಮಟ್ಟತಾಳ 

" ದ್ರೋಣಂಚ ಭೀಷ್ಮಂಚ ಜಯದ್ರಥಂಚ 
ಕರ್ಣಂ ತಥಾನ್ಯಾನಪಿ ಯೋಧ ವೀರಾನ್ 
ಮಯಾ ಹತಾಂ ಸ್ತ್ವಂ ಜಹಿ ಮಾ ವ್ಯಥಿಷ್ಠಾ
ಯುದ್ಧ್ಯಸ್ವ ಜೇತಾऽಸಿ ರಣೇ ಸಪತ್ನಾನ್ " (ಅ 11 ಶ್ಲೋ 34)
ಪ್ರಾಣನಾಥನೆ ಗುರುವಿಜಯವಿಠ್ಠಲರೇಯಾ 
ಎನಗಾವದು ಕೃತ್ಯ ಇದರೊಳಗೆ ॥ 2 ॥

 ತ್ರಿವಿಡಿತಾಳ 

ವೀರನಾದವ ಒಂದು ಕರಗಸ ಕೈಯಲ್ಲಿ 
ಧರಿಸಿ ಶತ್ರುಗಳನ್ನು ಹನನ ಮಾಡೆ
ಪರಿಪ್ರಾಪ್ತವಾದ ಘನತಿಯು ಪುರುಷಗಲ್ಲದೆ ಜಡ 
ಕರಗಸಕೆ ಕೀರ್ತಿ ಬರುವದೆಂತೊ
ತುರಗ ಬಿಗಿದ ರಥ ಗಮನಾಗಮನದಿಂದ 
ಪರಿಖ್ಯಾತಾ ವೈದಿದ ಕೀರ್ತಿಯನ್ನು
ತುರಗ ಶ್ರೇಷ್ಠಕೆ ಹೊರತು ಜಡಕೆ ಬರುವದುಂಟೆ ಈ
ತೆರದಿ ಬರುವದಯ್ಯಾ ಎನಗೆ ಕೀರ್ತಿ
ಹರಿ ನೀ ವೊಲಿದು ಎನ್ನ ನಾಮ ರೂಪವ ಧರಿಸಿ 
ಧರಣಿ ಭಾರವ ನಿಳುಹಿ ಮೆರೆದ ದೇವಾ 
" ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ 
ಉಭೌತೌ ನವಿಜಾನೀತೋ ನಾಯಂ ಹಂತಿ ನಹನ್ಯತೇ "
ಕರುಣಾನಿಧಿಯೇ ಗುರುವಿಜಯವಿಠ್ಠಲರೇಯಾ 
ಹರಣ ಮಾಡುವ ಕರ್ತು ನೀನೆ ದೇವಾ ॥ 3 ॥

 ಅಟ್ಟತಾಳ 

" ನ ಜಾಯತೇ ಮ್ರಿಯತೇ ವಾ ಕದಾಚಿನ್ನಾ -
ಯಂ ಭೂತ್ವಾ ಭಾವಿತಾವಾ ನಭೂಯಃ 
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ 
ನಹನ್ಯತೆ ಹನ್ಯಮಾನೇ ಶರೀರೇ " 
ವಿಜಯಸಾರಥಿ ಗುರುವಿಜಯವಿಠ್ಠಲರೇಯ 
ಸೋಜಿಗವೇ ಸರಿ ಎನ್ನ ಅಪರಾಧವಾ ॥ 4 ॥

 ಆದಿತಾಳ 

" ಲೇಲೀಹ್ಯಸೇ ಗ್ರಸಮಾನಃ ಸಮಂತಾತ್ 
ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ
ತೇಜೋಭಿರಾಪೂರ್ಯ ಜಗತ್ ಸಮಗ್ರಂ 
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ " (ಅ 11 ಶ್ಲೋ 30)
ಬಾಲಾರ್ಕಕೋಟಿ ಪ್ರಭ ಗುರುವಿಜಯವಿಠ್ಠಲರೇಯಾ 
ಆಲೋಚಿಸಿದರೂ ಎನಗಿಲ್ಲಪರಾಧವಾ ॥ 5 ॥

 ಜತೆ 

ಬ್ರಹ್ಮಸ್ತು ಬ್ರಹ್ಮಾನಾಮಾಸೌ ರುದ್ರಸ್ತು ರುದ್ರನಾಮಾ 
ಎಮ್ಮ ನಾಮವು ನೀನೇ ಗುರುವಿಜಯವಿಠ್ಠಲರೇಯಾ ॥
*********

ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ 
( ಗುರುವಿಜಯವಿಠ್ಠಲ  ಅಂಕಿತ ) 
ಭಗವದ್ಗೀತಾ  ಸುಳಾದಿ 
ರಾಗ ಕಲ್ಯಾಣಿ 
ಧ್ರುವತಾಳ 
" ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ
ಜಿತ್ವಾ ಶತ್ರೂನ್ ಭುಂಕ್ಷ್ವಂ ರಾಜ್ಯಂ ಸಮೃದ್ಧಂ
ಮಯೈ ವೈತೇ ನಿಹತಾಃ ಪೂರ್ವಮೇವ 
ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ " (ಅ 11 ಶ್ಲೋ 33)
ಎನ್ನಿಂದ ಆದ ಕೃತ್ಯ ಅವಜ್ಞ ಮಾಡದಲೆ 
ಉತ್ತರವ ಪೇಳುವದು 
ಭಾವಾಭಿಜನ್ಯವಾದ ಅಹಂಕಾರವಾದರೂ 
ಶ್ರೀವರ ನಿನ್ನಿಂದೇ ಪುಟ್ಟಿತೆನಗೆ 
ಪಾವನ ಮಹಿಮ ಗುರುವಿಜಯವಿಟ್ಠಲರೇಯಾ 
ಆವಪರಾಧ ಉಂಟು ತಿಳಿಸಿ ಪೇಳೊ ॥ 1 ॥ 
ಮಟ್ಟತಾಳ 
" ದ್ರೋಣಂಚ ಭೀಷ್ಮಂಚ ಜಯದ್ರಥಂಚ 
ಕರ್ಣಂ ತಥಾನ್ಯಾನಪಿ ಯೋಧ ವೀರಾನ್ 
ಮಯಾ ಹತಾಂ ಸ್ತ್ವಂ ಜಹಿ ಮಾ ವ್ಯಥಿಷ್ಠಾಃ
ಯುದ್ಧ್ಯಸ್ವ ಜೇತಾऽಸಿ ರಣೇ ಸಪತ್ನಾನ್ " (ಅ 11 ಶ್ಲೋ 34)
ಪ್ರಾಣನಾಥನೆ ಗುರುವಿಜಯವಿಟ್ಠಲರೇಯಾ
ಎನಗಾವದು ಕೃತ್ಯ ಇದರೊಳಗೆ ॥ 2 ॥ 
ತ್ರಿವಿಡಿತಾಳ 
ವೀರನಾದವ ಒಂದು ಕರಗಸ ಕೈಯಲ್ಲಿ 
ಧರಿಸಿ ಶತ್ರುಗಳನ್ನು ಹನನ ಮಾಡೆ
ಪರಿಪ್ರಾಪ್ತವಾದ ಘನತಿಯು ಪುರುಷಗಲ್ಲದೆ ಜಡ 
ಕರಗಸಕೆ ಕೀರ್ತಿ ಬರುವದೆಂತೊ
ತುರಗ ಬಿಗಿದ ರಥ ಗಮನಾಗಮನದಿಂದ 
ಪರಿಖ್ಯಾತಾ ವೈದಿದ ಕೀರ್ತಿಯನ್ನು
ತುರಗ ಶ್ರೇಷ್ಠಕೆ ಹೊರತು ಜಡಕೆ ಬರುವದುಂಟೆ ಈ
ತೆರದಿ ಬರುವದಯ್ಯಾ ಎನಗೆ ಕೀರ್ತಿ
ಹರಿ ನೀ ವೊಲಿದು ಎನ್ನ ನಾಮ ರೂಪವ ಧರಿಸಿ 
ಧರಣಿ ಭಾರವ ನಿಳುಹಿ ಮೆರೆದ ದೇವಾ 
" ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ 
ಉಭೌತೌ ನವಿಜಾನೀತೋ ನಾಯಂ ಹಂತಿ ನಹನ್ಯತೇ "
ಕರುಣಾನಿಧಿಯೇ ಗುರುವಿಜಯವಿಟ್ಠಲರೇಯಾ 
ಹರಣ ಮಾಡುವ ಕರ್ತು ನೀನೆ ದೇವಾ ॥ 3 ॥ 
ಅಟ್ಟತಾಳ 
" ನ ಜಾಯತೇ ಮ್ರಿಯತೇ ವಾ ಕದಾಚಿನ್ನಾ -
ಯಂ ಭೂತ್ವಾ ಭಾವಿತಾವಾ ನಭೂಯಃ 
ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ 
ನಹನ್ಯತೆ ಹನ್ಯಮಾನೇ ಶರೀರೇ " 
ವಿಜಯಸಾರಥಿ ಗುರುವಿಜಯವಿಟ್ಠಲರೇಯ
ಸೋಜಿಗವೇ ಸರಿ ಎನ್ನ ಅಪರಾಧವಾ ॥ 4 ॥ 
ಆದಿತಾಳ 
" ಲೇಲೀಹ್ಯಸೇ ಗ್ರಸಮಾನಃ ಸಮಂತಾತ್ 
ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ
ತೇಜೋಭಿರಾಪೂರ್ಯ ಜಗತ್ ಸಮಗ್ರಂ 
ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ " (ಅ 11 ಶ್ಲೋ 30)
ಬಾಲಾರ್ಕಕೋಟಿ ಪ್ರಭ ಗುರುವಿಜಯವಿಟ್ಠಲರೇಯಾ
ಆಲೋಚಿಸಿದರೂ ಎನಗಿಲ್ಲಪರಾಧವಾ ॥ 5 ॥ 
ಜತೆ 
ಬ್ರಹ್ಮಸ್ತು ಬ್ರಹ್ಮಾನಾಮಾಸೌ ರುದ್ರಸ್ತು ರುದ್ರನಾಮಾ 
ಎಮ್ಮ ನಾಮವು ನೀನೇ ಗುರುವಿಜಯವಿಟ್ಠಲರೇಯಾ ॥
******


No comments:

Post a Comment