Thursday 26 December 2019

ಅಡಿಗಳಿಗೊಂದಿಪೆ ಪುರಂದರಗುರುವೆ ankita vijaya vittala ADIGALIGONDIPE PURANDARA GURUVE PURANDARADASA STUTIH


ಶ್ರೀ ವಿಜಯದಾಸರ ಕೃತಿ 

 ರಾಗ ಪೂರ್ವಿಕಲ್ಯಾಣಿ         ಆದಿತಾಳ 

ಅಡಿಗಳಿಗೊಂದಿಪೆ ಪುರಂದರ ಗುರುವೆ ॥ ಪ ॥
ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ॥ ಅ.ಪ ॥

ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ।
ಗುರು ವ್ಯಾಸರಾಯರಿಂದುಪದೇಶಗೊಂಡೆ ॥
ಎರಡೆರಡು ಲಕ್ಷದಿಪ್ಪತೈದು ಸಾವಿರ ।
ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ॥ 1 ॥

ಗಂಗಾದಿ ಸಕಲ ತೀರ್ಥಂಗಳ ಚರಿಸಿ ತು - ।
ರಂಗವದನ ವೇದವಾಸ್ಯನ ॥
ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ ।
ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ॥ 2 ॥

ನಿನ್ನತಿಶಯಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕನ ಸೇವಕನೆಂತೆಂದು ॥
ಪನ್ನಗಶಯನ ಮುಕುಂದ ಕರುಣ ಪ್ರ - ।
ಸನ್ನ ವಿಜಯವಿಠ್ಠಲ ಸಂಪನ್ನ ॥ 3 ॥
***

pallavi

aDigaLandipe purandara guruvE

anupallavi

kadu jnAna bhakti vairAgyada nudhiye

caraNam 1

vara madhvamata kSIrAmbudhige candranade guru vyAsarAyarindupadEshagoNDe
eraDeraDu lakSIdippattaidu sAvira vara nAmALi mADi harige arpisside

caraNam 2

gangAd sakala tIrthangaLa carisi turanga vadana vEdavyAsara
hingade manadalli mereva mangaLa mahimeyanutisi nutisi nA

caraNam 3

ninnatishaya guNa varNisallaLavalla ninna sEvakana sEvakanentendu
pannaga shayana mukunda karuNa prasanna vijayaviThala sampanna
***



ಅಡಿಗಳಿಗೊಂದಿಪೆ ಪುರಂದರಗುರುವೆ ||ಪ||
ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ||

ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ
ಗುರು ವ್ಯಾಸರಾಯರಿಂದುಪದೇಶಗೊಂಡೆ
ಎರಡೆರಡು ಲಕ್ಷದಿಪ್ಪತ್ತೈದು ಸಾವಿರ
ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧||

ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ
ರಂಗವದನ ವೇದವ್ಯಾಸನ
ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ
ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨||

ನಿನ್ನತಿಶಯಗುಣ ವರ್ಣಿಸಲಳವಲ್ಲ
ನಿನ್ನ ಸೇವಕನ ಸೇವಕನೆಂತೆಂದು
ಪನ್ನಗಶಯನ ಮುಕುಂದ ಕರುಣ ಪ್ರ-
ಸನ್ನ ವಿಜಯವಿಠಲ ಸಂಪನ್ನ ||೩||
*******

No comments:

Post a Comment