Friday 27 December 2019

ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ ankita varaha timmappa

ರಾಗ ಎರಕಲಕಾಂಬೋದಿ ಆದಿತಾಳ 

ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ-
ರಾದಿಯ ತಿಳಿಯಲು ಕೇಳಿ ಬಲ್ಲವರು ||ಪ||

ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ
ಮೂಲ ಮಂತ್ರಂಗಳ ಜಪಿಸುವ ಬೂದಿ
ಮೂಲಾಧಾರವ ತೋರುವ ಬೂದಿ
ಕಾಲ ಕರ್ಮಂಗಳ ಕಡಿವಂಥ ಬೂದಿ ||೧||

ಏಳು ಸುತ್ತಿನ ಒಳಗೆ ಇರುವಂಥ ಬೂದಿ
ಏಳು ವೈರಗಳನ್ನು ಕಳೆವಂಥ ಬೂದಿ
ಏಳು ಅಗಳ ದಾಟಿ ಹಾರುವ ಬೂದಿ ಬ-
ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ ||೨||

ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ
ಕುಂಭಕದೊಳಗದ ಇರಿಸುವ ಬೂದಿ
ಸಂಭ್ರಮದಿ ಅರಸನ ಗೆಲುವಂಥ ಬೂದಿ
ಅಂಬರಕಾಗಿಯೆ ಲಂಬಿಪ ಬೂದಿ ||೩||

ಪಂಚಾಗ್ನಿಯಿಂದಲೆ ಬೆಂದಿಹ ಬೂದಿ
ಪಂಚತತ್ವಗಳನು ಗೆಲುವಂಥ ಬೂದಿ
ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ
ವಂಚಿಸಿಕೊಳ್ಳದೆ ಧರಿಸುವ ಬೂದಿ ||೪||

ಆರು ವೈರಿಗಳನ್ನು ತೂರುವ ಬೂದಿ
ಆರು ಭಾವಗಳನ್ನು ಬೇರಿಟ್ಟ ಬೂದಿ
ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ
ಆರಿಗೂ ತೋರದೆ ಹಾರುವ ಬೂದಿ ||೫||

ಅಷ್ಟಮದಂಗಳ ಕಟ್ಟುವ ಬೂದಿ
ದುಷ್ಟಾತ್ಮರನ್ನು ಅಟ್ಟುವ ಬೂದಿ
ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ
ಭ್ರಷ್ಟ ಕರ್ಮಗಳನ್ನು ಸುಟ್ಟಂಥ ಬೂದಿ ||೬||

ಸಕಲಋಷಿಗಳೆಲ್ಲ ಧರಿಸುವ ಬೂದಿ
ತ್ರಿಕರ್ಣ ಶುದ್ಧದಿ ತುಂಬಿದ ಬೂದಿ
ಮಕರಕುಂಡಲಧರ ಮರುಳಹ ಬೂದಿ
ಸಖನಹ ವರಾಹ ತಿಮ್ಮಪ್ಪ ಬೂದಿ ||೭||

---ರಚನೆ- ನೆಕ್ಕರ ಕೃಷ್ಣದಾಸರು
********

No comments:

Post a Comment