Friday 27 December 2019

ವರದಾ ತೀರದಿ ನೆಲಸಿಹ ಗುರುವರನ್ಯಾರೆ ankita shyamasundara susheelendra teertha stutih

ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ

ವರದಾಯ ಶ್ರೀ ರಾಘವೇಂದ್ರರ
ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ

ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ
ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ
ಧರಿಸಿ ಧರಣಿಯೋಳ್ ಪರಿ ಪರಿ ವಿಭವದಿ
ಮೆರೆದ ಕರುಣವರ ಪುಣ್ಯ ಪುರುಷನ 1

ತನುಮನಧನ ವನಿತಾದಿ ವಿಷಯ ವಿರಹಿತನು ಪೇಳಮ್ಮಯ್ಯ |
ತನುರಹಿತ ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ |
ಅನಿಮಿಷ ಲೋಚನೆ ಅನುಮಾನಿಸದಿರು
ಅನಿಮಿಷಾಮಶರಿವರನನುದಿನ ಸೇವಿಸು 2

ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ
ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ
ಸತತ ರವಿ ಎನಿಸಿ ಶಾಮಸುಂದರನ
ಅತಿ ಭಕುತಿಲಿ ತುತಿಪ ಗುಣನಿಧಿ 3
**********

No comments:

Post a Comment