Friday 27 December 2019

ಸಿರಿಯರಸನ ಕರುಣಾಳುವ ಸರಸಿಜ ankita purandara vittala vyasaraja stutih

ಉದಯರಾಗ 

ನೆರೆ ನಂಬಿರೊ ಎಲೆ ಅಣ್ಣ ||ಪ||

ಸಿರಿಯರಸನ ಕರುಣಾಳುವ ಸರಸಿಜಸಂಭವನ ಪಿತನ
ಸುರರೊಡೆಯನ ಸಕಲ ವೇದ ಒರಲೊ ಹರಿಯ
ಪರದೇವತೆ ಇದೇ ಇದೇ ಎಂದು ಕರಕಮಲದೊಳಿಟ್ಟು ಮೆರೆವ
ಪರಮಹಂಸರಾದ ವ್ಯಾಸರಾಯರ ||

ಜ್ಞಾನಭಕ್ತಿ ವೈರಾಗ್ಯ ನಿಧಾನವ ನಮಗಿತ್ತು ಮೆರೆವ
ದಾನವಾರಿ ಗುಣಗಣದಲಿ ಮನಮೊಳೆತಿಪ್ಪನ
ತಾನೆ ದೈವವೆಂಬಾಸುರಕಾನನಗಳ ತರಿದಟ್ಟುವ
ಆನಂದತೀರ್ಥರ ಪಟ್ಟದಾನೆ ವ್ಯಾಸರಾಯರ ||

ಅಂದು ಸಾಸಿರಮುಖದಲಿ ಮೋದದಲಿ ಮು-
ಕುಂದನ ಅಹಿರಾಜ ಪೊಗಳಿದಂದದಲಿಂದು ಕೃಪೆ-
ಯಿಂದ ಪೊರೆವ ಅಭಿನವ ಪುರಂದರವಿಠಲನ ಜಗಕೆ
ತಂದು ತೋರಿದ ವೈಷ್ಣವ ಕುಮುದೇಂದು ವ್ಯಾಸರಾಯರ ||
**********

No comments:

Post a Comment