Wednesday 11 December 2019

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ankita mahipati

ಭೈರವಿ ರಾಗ ತೀನ್ ತಾಳ

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ
ಏಕಾಕಾರದಲೆನ್ನ ಹೊರಿಯಲಾರೇನಯ್ಯ ||ಪ||

ನೀರ ತೆರೆಯ ಕಡಿದು ಹೃದಯಕ ಸ್ವರಣದಿ
ಭರದಿ ಮುಣುಗಿ ನೀರ ನಡಿಗಿ ದಣಿದೇನಯ್ಯ ||೧||

ವಾರಿಧಿ ಮಥನದಿ ಮೇರುಪರ್ವತವನ್ನು
ಭಾರ ಬೆನ್ನಿಲಿ ಪೊತ್ತು ಬೆವರಿ ದಣಿದೇನಯ್ಯ ||೨||

ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ
ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ ||೩||

ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ
ಕರುಳ್ವನಮಾಲೆಯ ಧರಿಸಿ ದಣಿದೇನಯ್ಯ ||೪||

ಧರಿಯ ಮೂರಡಿ ಮಾಡಿ ಎರೆದು ದಾನವ ಬೇಡಿ
ನರನ ಪಾತಾಳಕೊತ್ತಿ ಬೆಳೆದು ದಣಿದೇನಯ್ಯ ||೫||

ಹಿರಿಯಳ ಶಿರವನು ಹರಿದು ಕತ್ತರಿಸಿತ್ತು
ಕರದಲ್ಲಿ ಪರಶುವ ಪಿಡಿದು ದಣಿದೇನಯ್ಯ ||೬||

ಶಿರಗಳ ಚೆಂಡಾಡಿ ರಾವಣೇಂದ್ರಜಿತನೆ
ಶರದಿ ಕುಂಭಕರ್ಣನ ಎಚ್ಚು (?) ದಣಿದೇನಯ್ಯ ||೭||

ತುರುಗಳ ಕಾಯಿದು ಉರುಗನ ತುಳಿದಿತ್ತು
ಗಿರಿಯ ಬೆರಳೆತ್ತಿ ತೋರಿ ದಣಿದೇನಯ್ಯ ||೮||

ಬರಿಯ ಬತ್ತಲೆ ಆಗಿ ಅರಿಯದೆ ತ್ರಿಪುರವ
ಸೇರಿ ನಾರೇರ ವ್ರತವಳಿದು ದಣಿದೇನಯ್ಯ ||೯||

ಏರಿ ಕುದುರೆಯ ತಿರುಹುರಾಹುತನಾಗು
ಪರಿಪರಿ ರೂಪವ ತಾಳಿ ದಣಿದೇನಯ್ಯ ||೧೦||

ಸರ್ವಾಪರಾಧವು ಕ್ಷಮೆಯಿಂದ ಮಹಿಪತಿಯ
ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ ||೧೧||
****

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ಪ  


ನೀರ ಥೆರಿಯ ಕಡಿದು ಹೃದಯದಕರ ಚರಣದಿ ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ 1 

ವಾರಿಧಿಮಥನದಿ ಮೇರುಪರ್ವತವನ್ನು ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ2 

ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ 3 

ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರಳೊನಮಾಲಿಯ ಧರಿಸಿ ದಣಿದೇನಯ್ಯ 4 

ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ 5 

ಹಿರಿಯಳ ಶಿರವನು ಹರಿದು ಕತ್ತರಿಸಿನ್ನು ಕರದಲ್ಲಿ ಪರಶುವ ಪಿಡದು ದಣಿದೇನಯ್ಯ 6 

ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ 7 

ಷತುರುಗಳ ಕಾಯಿದು ಉರುಗನ ತುಳದಿನ್ನು ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ 8 

ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ 9 

ಏರಿ ಕುದುರಿಯ ತಿರುಹು ರಾಹುತನಾಗಿ ಪರಿ ರೂಪವ ತಾಳಿ ದಣಿದೇನಯ್ಯ 10 

ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ 11

****

No comments:

Post a Comment