Friday 27 December 2019

ಹತೆರಳಿದರು ಹರಿಪುರಕಿಂದು ankita madhwapati vittala

ತೆರಳಿದರು ಹರಿಪುರಕಿಂದು || ಪಲ್ಲವಿ ||

ಪುರಂದರದಾಸರಾಯರು ದೀನಬಂಧು || ಅನುಪಲ್ಲವಿ ||

ರಕ್ತಾಕ್ಷಿವತ್ಸರ ಪುಷ್ಯಾಂತ ರವಿವಾರ
ಮುಕ್ತಿಗೈದಿದರು ಕೇಳಿ ಬುಧಜನರು || ೧ ||

ವಿರೂಪಾಕ್ಷ ಕ್ಷೇತ್ರದಿ ವಿಠಲನ್ನ ಸನ್ನಿಧಿಯಲ್ಲಿ
ಶರೀರವನಿರಿಸಿ ಅನಾಥರನು ಹರಿಸಿ || ೨ ||

ಎತ್ತುವರಾರತಿ ಪುಷ್ಪಕವೇರಿಸಿ
ಸತ್ತಿಗೆ ಪಿಡಿಯೇ ದುಂದುಭಿಗಳು || ೩ ||

ಆ ಮಹಾವೈಕುಂಠನೈದುವರಿಗೆ ಹರಿ
ನಾಮದ ಸೋಪಾನ ದಯದಿಂದ ತೋರಿ || ೪ ||

ವರವೇದತುಲ್ಯ ಪದಗಳ ಸಂಖ್ಯೆಯ ಮಾಡಿ
ಗುರು ಮಧ್ವಪತಿವಿಠಲನ್ನ ಸ್ಮರಿಸುತಲಿ || ೫ ||
**********


[ ಈ ಪದಗಳನ್ನು ರಚಿಸಿರುವ ಗುರುಮಧ್ವಪತಿವಿಠಲಾಂಕಿತದ ದಾಸರು ಪುರಂದರದಾಸರ ಮಕ್ಕಳೆಂದೇ ಪ್ರತೀತಿ

No comments:

Post a Comment