Friday 27 December 2019

ಜಯ ಜಯತು ಕೃಷ್ಣರ್ಯ ankita jayesha vittala

ಜಯ ಜಯತು ಕೃಷ್ಣರ್ಯ । ಜಯ ಜಯತು ಸಜ್ಜನ ಅಭಯ ।
ಜಯತು ಕೈವಲ್ಯದನೆ ಜಯತು ಗುರುವೆ ॥ ಪ ॥
॥ ಜಯತು ಜಯತು ॥

ರವಿಯಂತೆ ಜಗದೊಳಗೆ ಉದ್ಭವಿಸಿ ಸುಜನಕ್ಕೆ ।
ಕವಿದ ಕತ್ತಲೆ ಕಳೆದು ಪವನಮತ ತೋರಿ ॥
ವಿವಿಧ ವೈಭವದಿಂದ ಅವನಿಯೊಳು ಸಂಚರಿಸಿ ।
ಭವ ಬಿಡಿಸಿ ಪಾಲಿಸಿದೆ ತವ ಜನರ ಪ್ರಭುವೇ ॥ 1 ॥

ಆರ್ತರಿಗೆ ಪೀಯೂಷ ಅರ್ಥಿಯಿಂದಲಿ ಇತ್ತು ।
ಧೂರ್ತರನು ಕೆಡಿಸಿದೆಯೊ ಕರ್ತ ಸರ್ವತ್ರ ॥
ಪಾರ್ಥಸಾರಥಿ ಸುಗುಣಕೀರ್ತಿ ಭೂ ಪ್ರಭುವರನೆ ।
ವ್ಯರ್ಥ ಇಹವೆಂದೆಮಗೆ ಸ್ವಾರ್ಥ ತೋರ್ದೆ ॥ 2 ॥

ಭಾರತೀಶನ ಭಜನೆ ಬಹುಭಾಗ್ಯವೆಂದರುಹಿ ।
ಆರಾಧಿಸುತ ಹರಿಯ ಪೊರೆದೆ ಎಮ್ಮಾ ॥
ಕೀರುತಿ ಗಭೀರನೆ ಸುಚಾರುಚರಣಕೆ ನಮೋ ।
ದೂರಿಡದೆ ಸೇರಿಸೋ ಭಾರಕರ್ತ ॥ 3 ॥

ಅಡಗಿಸೀ ಕಲಿಯನ್ನು ನಡುಗಿಸುತ ದುರ್ಜನರ ।
ಪೊಡವಿಯನು ಸಂಚರಿಸಿ ಸುಜನಕ್ಕೆ ॥
ದೃಢಪಡಿಸಿ ಸನ್ಮತಿಯ ಒಡಲಲ್ಲಿ ಶ್ರೀಹರಿಯ ।
ಒಡೆಯ ತೋರಿದಿ ಸ್ವಾತ್ಮ ಕರುಣಕಡಲಾ ॥ 4 ॥

ಬಡವನಾನೊಬ್ಬ ಕಡುಮೂರ್ಖನಾಗಿಹೆನು ।
ನಡುಗುತಿದೆ ಭವದಲ್ಲಿ ಮುಂದೋರದೆ ॥
ದೃಢಭಕುತರಲಿ ಎನ್ನ ಬಿಡದೆ ಪಾಲಿಪೆಯೆಂದೆ ।
ಮೃಡನೊಡೆಯ ಶ್ರೀಹರಿಯ ವೈಭವವ ತೋರಿ ॥ 5 ॥

ಅಂದಿನಿಂದಲಿ ನಾನು ಮಂದಮತಿಯಲಿ ಅಲೆದು ।
ನೊಂದ ಪರಿ ನೀಬಲ್ಲಿ ಆರ್ತಹರನೇ ॥
ಕುಂದುಗಳ ಅಳಿದು ಒಂದುಕ್ಷಣ ಅಗಲದಲೆ ।
ಇಂದು ಮುಂದೆ ಒಳಹೊರಗೆ ಪೊಂದಿ ಪೊರೆಯೋ ॥ 6 ॥

ಇನ್ನು ಮುಂದಾದರೂ ನಿನ್ನವರ ಒಳಗಿಟ್ಟು ।
ಧನ್ಯನಾ ಮಾಡೆನ್ನ ಪುಣ್ಯಮೂರ್ತೇ ॥
ಎನ್ನ ಗುರುಗಳ ದೈವ ನಿನ್ನ ಬಿಟ್ಟಿರಲಾರೆ ।
ಅನ್ಯಥಾ ಇಡಬೇಡ ನೋಡೊ ಎನ್ನ ॥ 7 ॥

ತನುವು ಭಾರವು ಎನಗೆ ಮನಕೊಂದು ಬೇಕಿಲ್ಲ ।
ದಿನದಿನದ ವೃತ್ತಿಗಳು ನಿನ್ನ ಆಜ್ಞಾ ॥
ಕನಸಿಲಾದರು ಒಮ್ಮೆ ಅನ್ನನಾ ಕಾಣದಿರೆ ।
ಪೂರ್ಣಕಾರುಣ್ಯ ಮಾಡೆನ್ನ ತಂದೆ ॥ 8 ॥

ಹೃದಯ ಶುದ್ಧಿಯ ಮಾಡು ಮದನಜನಕನ ಬೀಡು ।
ಸದಯ ಮನ ಬದಿಗೈದು ಭಕ್ತಿಪ್ರವಹದಿ ॥
ಮುದದಿ ಮಜ್ಜನಗೈಸಿ ಜಯೇಶವಿಠ್ಠಲ ನ ।
ಬದಿಯಲ್ಲಿ ನಿಲಿಸೆನ್ನ ಒಡನಿದ್ದು ನೀನು ॥ 9 ॥
**********


No comments:

Post a Comment