Saturday 9 October 2021

ಎಂಥಾದೋ ಶ್ರೀ ವೈಕುಂಠವೆಂಥಾದೋ ಕಂತುಪಿತನ ankita jagannatha vittala ENTHAADO SRI VAIKUNTAVENTHAADO KANTUPITANA



ಎಂಥಾದೋ ಶ್ರೀ ವೈಕುಂಠವೆಂಥಾದೋ ಪ

ಕಂತುಪಿತನ ದೇಹಕಿರಣ ಅದ
ರಂತರಂಗ ಹೇಮಾಭರಣ ಕಾಂತಿ
ಗಂತು ನಾಚಿದ ರವಿ ಅರುಣ ಅಹಾ
ನಂತ ಕಾಲದಲ್ಲಿ ಸಂತತ ತುತಿಪರ್ಗೆ
ಪ್ರಾಂತಕ್ಕೆ ನಾಲ್ಕು ನಿಶ್ಚಿಂತ ಮುಕ್ತಿಯ ಸ್ಥಾನ 1

ಪಾಲಸಾಗರ ಮಧ್ಯೆ ಕೂಟ ಒಳ
ಗೇಳು ಸುತ್ತಿಸಾಗರ ದಾಟಿ ತಾಳ
ಮೇಳದವರು ಮೂರುಕೋಟಿ ನಾಮ
ಪೇಳ್ವ ಗಾಯಕರ ಗಲಾಟೆ ಆಹ
ಶೀಲ ಮುನಿಗಳು ದೇವ ಗಂಧರ್ವರು
ಜೀವನ್ಮುಕ್ತರುಗಳು ಸೇರಿಪ್ಪ ಹರಿಪುರ2

ಹೇಮ ಪ್ರಾಕಾರದ ಪುರವು ಅಲ್ಲಿ
ಆ ಮಹ ಬೀದಿ ಶೃಂಗಾರವು ನೋಡೆ
ಕಾಮಧೇನು ಕಲ್ಪತರುವು ಬಲು
ರಮಣೀಯವಾದ ಇರವು ಆಹಾ
ಶ್ರೀ ಮೂರುತಿಯೊಂದು ವೇದಾಂತಶ್ರುತಿ ಸಾರೆ
ಆ ಮಹಮುಕ್ತರು ಸೇರಿಹ ಮಂದಿರ 3

ಸುತ್ತಲು ಸನಕಾದಿ ಮುನಿಯ ದಿವ್ಯ
ನರ್ತನ ಗಾಯನ ಧ್ವನಿಯು ಪುಷ್ಟ
ವೃಷ್ಟಿ ಚಂಪಕ ಜಾಜಿ ಹನಿಯು ಅಲ್ಲಿ
ಅಷ್ಟಮ ಸ್ತ್ರೀಯರ ಮನೆಯು ಆಹಾ
ಪಾದ ಸಂ
ಪತ್ತಿಗೀ ಶಯನ ಸರ್ವೋತ್ತಮನ ಗೃಹ 4

ಥಳಥಳಿಸುವ ದಿವ್ಯದ್ವಾರ ಅಲ್ಲಿ
ಹೊಳೆವಂಥ ರಂಗಮಂದಿರ ಮುತ್ತಿ
ಭಾರ ಹೇಮ
ತುಳಸಿ ಸರದ ಶೃಂಗಾರ ಆಹಾ
ಹೊಳೆವ ಮಾಣಿಕದ ಮಂಟಪ ಮಧ್ಯದೊಳ್ಮೆರವ
ಚೆಲುವ ಜಗನ್ನಾಥ ವಿಠಲನ ನಿಜಸ್ಥಾನ 5
****

No comments:

Post a Comment