Saturday 14 December 2019

ಹರಣ ಸೀಳಿದ ದಾರಿತಾರಾತಿ ಸಂಘ ankita jagannatha vittala

ಜಗನ್ನಾಥದಾಸರು
ಹರಣ ಸೀಳಿದ
ದಾರಿತಾರಾತಿ ಸಂಘ ನಮಿಪೆನನವರತ ಪ

e್ಞÁನ ಜ್ಞೇಯ e್ಞÁತೃನಾಮಕ ರಮಾಪತಿಗೆ
ಕರ್ಮ ಕರಣಾ
ನೀನೆನಿಸಿ ತತ್ವದೇವತೆಗಳಿಂದೊಡಗೂಡಿ
ಪ್ರಾಣಪಂಚಕ ರೂಪ ಜಗವ ಪಾಲಿಸುವೆ1

ಕಾರುಣ್ಯನಿಧಿಯೆ ಇಪ್ಪತ್ತೊಂದು ಸಾವಿರದ
ಈ ರೀತಿ ಮಾಳ್ಪೆನೆಂದೆಲ್ಲರಿಗೆ ತೋರ್ಪಿ 2

ಉದ್ಧರಿಸಬೇಕು ಯಂತ್ರೋದ್ಧಾರ ಪ್ರಾಣ ಶ್ರೀ
ಮದ್ಧನುಮ ಭೀಮ ಗುರುಮಧ್ವ ಮುನಿಪ
ಸಿದ್ಧಾಂತ ತತ್ವಜ್ಞ ಸದ್ವೈಷ್ಣವರ ಸಭಾ
ಮಧ್ಯದೊಳಗಸಮ ಸದ್ವಿದ್ಯೆಗಳನೊರೆದೆ3

ದಾಶರಥಿ ಪ್ರೀಯತಮ ವಿಭೀಷಣನ ಮನದಭಿ
ಲಾಷೆಗಳನೆಲ್ಲ ಪೂರೈಸಿ ನಿಂದೆ
ವ್ಯಾಸಮುನಿ ಹೃತ್ಕುಮುದ ಭೇಶ ಬಿನ್ನೈಪೆ ಸಂ
ತೈಸು ನಿನ್ನವರ ಭವಕ್ಲೇಶಗಳ ಕಳೆದು 4

ಅಪರೋಕ್ಷ ಪವ
ಮಾನ ನಿನ್ನವತಾರ ಅಂಶಗಳಲಿ
ನ್ಯೂನವಿಲ್ಲದೆ ಜಗನ್ನಾಥವಿಠಲನ ಚರಿ
ತಾನುಸಾರದಲಿ ತವ ಚರಿತೆ ತೋರಿಸುವೆ 5
********

No comments:

Post a Comment