Saturday 14 December 2019

ಪಾದ ನಂಬೋ ಸಿದ್ಧಾಂತ ಸಾರವ ankita jagannatha vittala

ಜಗನ್ನಾಥದಾಸರು
ಪಾದ ನಂಬೋ
ಸಿದ್ಧಾಂತ ಸಾರವ ಹೃದಯದಿ ತುಂಬೋ ಪ

ಶತಕೋಟಿ ಜನ್ಮ ಸುಕೃತದಿ
ಅತುಳ ವೈಷ್ಣವಜನ್ಮ ದೊರಕಿತು ನಿಜದಿ
ಪಾದ ರಜದಿ ಮುಣುಗುತ
ದುರ್ವಿಷಯಗಳನು ನಿಗ್ರಹಿಸೊ ನೀ ತ್ವರದಿ 1

ಈತನ ವಾಕ್ಯವೆ ವೇದವಾಕ್ಯಗಳೆಂದರಿಯೊ
ಜಿಷ್ಣು ಸರ್ವೇಶ ಧಾತೃಗಳೊಂದೆಂಬ ದು
ರ್ವಾದಿ ದುರ್ಗಜಕೆ ಕೇಸರಿಯಾಗಿರುವ 2

ವಟು ವೃಷ್ಟಿವಂಶ ಲಲಾಮ
ತಟಿತಾಭ ಜಗನ್ನಾಥ ವಿಠಲಗೆ ಪ್ರೇಮಾ
ಸ್ಫುಟರೂಪತ್ರಯನೆ ನಿಷ್ಕಾಮಾ ನಿ
ಷ್ಕುಟಿಲ ಭಾರತಿರಮಣ ಹನುಮಂತ ಭೀಮ 3
********

No comments:

Post a Comment