Saturday 14 December 2019

ಶ್ರೀಹನುಮ ಮಾಂ ಪಾಹಿ ಪವನ ankita jagannatha vittala

ಜಗನ್ನಾಥದಾಸರು
ಶ್ರೀ ಹನುಮ ಮಾಂ ಪಾಹಿ ಪವನ ಜ
ಖಗ ವಾಹನನ ದಾಸ
ನೇಹದಲಿ ಬಿಂಬರೂಪ ತೋರೆನಗೆ ಪ

ಭಾನುಸುತ ಪವಮಾನ ನಂದನ
ನೀನೆ ಸಲಹಿದೆ
ಮಾನನಿಧಿ ರಾಮಬಾಣದಲಿ ಇಂದ್ರ
ಸೂನುವಿನ ಪ್ರಾಣ
ಹಾನಿಯ ಗೈಸಿ ಮೇಣ್ ಆ ಕಿಷ್ಕಿಂಧ ನಗರದಲ್ಲಿ
ವಾನರೇಂದ್ರಗೆ
ನಾನಾ ಪರಿಯಲ್ಲಿ ಆನಂದವಿತ್ತ
e್ಞÁನಿ ನಿನ್ನ ಅಧೀನದವನೆಂದೆಂದು 1

ಸುರೇಶನಂದನ ಮಾರುತನೆ ನಿನ್ನ
ಕರುಣವು ಎನ್ನೊ
ಳಿರದ ಕಾರಣ ಹರಿ ಮುನಿದನೆಂದು
ಅರಿದು ಮನದಿ ದ್ವಾ
ಪರದಲ್ಯವ ತರಿಸಿ ಗುರುವರ್ಯ ನಿಮ್ಮ
ರಣ ಸೇವಿಸೆ
ಪೊರೆದೆ ಅಂದು ಸಮರದಿ ಕೃಷ್ಣನ
ಪರಮಕೃಪೆ ಪಡೆದವರಿಗೆ ನಿನ್ನಯ ಕರುಣ ಕಾರಣವೊ 2

ಮೂರನೆಯ ಅವತಾರದಿಂದಲಿ
ಧಾರುಣಿಯೊಳು .......... ಬೀರಿದ್ದ ಶಾಸ್ತ್ರವ
ಬೇರೊರಿಸಿ ಕೀಳ್ದು
ತೋರಿಸಿದಿ ಹರಿಯ ಆರು ನಿನ್ನನು
ಆರಾಧಿಪರೊ ಆ
ಧೀರರಿಗೆ ದೋಷ ಸೇರಲಮ್ಮವು
ಮಾರಪಿತ ಜಗನ್ನಾಥ ವಿಠಲನ ಕರುಣ ವಾಹುದೊ 3
*********

No comments:

Post a Comment