Saturday 14 December 2019

ಭದ್ರಾ ಮೂರುತಿ ನಿರ್ವಾತಾಂಹ್ವ ankita jagannatha vittala

ಜಗನ್ನಾಥದಾಸರು
ಭದ್ರಾ ಮೂರುತಿ ನಿರ್ವಾತಾಂಹ್ವ ಪ

ಹೃದ್ರೋಗ ಕಳೆದು e್ಞÁನಾದ್ರ್ರ ಸ್ವಾಂತನ ಮಾಡು
ಪದ್ರಾ ಸಾಮಗಾಘ ಸಮುದ್ರ ದಾಟಿಸಿ ಬೇಗ ಅ

ಏಸೇಸು ಕಲ್ಪಗಳಲ್ಲಿ ನಿನ್ನಾ
ದಾಸನೆಂದು ಎನ್ನ ಬಲ್ಲೀ ಈಶ ನೀನೆಂಬುದು
ಲೇಶವರಿಯೆ ಕ್ಲೇಶನಾಶನ ಪ್ರಭುವೆ ವಾರಾಶಿಜೆ ವಲ್ಲಭ
ವಾಸವಾನುಜ ವನಧಿಶಯನ ಮ
ಹೇಶವಂದಿತ ವರದ ಹೇ ಕರು
ಣಾ ಸಮುದ್ರ ಕರಾಳವದನನೆ ನೀ
ಸಲಹದಿರೆ ಕಾಣೆ ಕಾಯ್ವರ 1

ಹೇಮ ಕಶ್ಯಪು ತನ್ನ ಸುತನಾ ನೋಯಿಸೆ
ಶ್ರೀ ಮನೋಹರನೇ ಆನತನಾ
ವ್ಯೋಮ ಪರ್ವತಾಂಬುಧಿ ಧಾಮದೊಳುಳುಹಿದ
ಭೂಮ ಸನ್ಮುನಿ ಗಣಸ್ತೋಮ ವಂದಿತ ಪಾದ
ಸಾಮಜೇಂದ್ರನನರಸಿಯೊಳು ಸು
ತ್ರಾಮನಂದನನಾ ರಣದಿ ಕುರು
ಭೂಮಿಪತಿ ಸಭೆಯೊಳಗೆ ದ್ರೌಪದಿ
ಯಾ ಮಹಾತ್ಮರ ಕಾಯ್ದ ಕರುಣಿ 2

ವೇದಗಮ್ಯನೆ ವೇದ ವ್ಯಾಸ ಕಪಿಲ
ಯಾದವೇಶ ಮಹಿದಾಸ ಶ್ರೀದ ಶ್ರೀಶ ಅ
ನ್ನಾದಾ ಕಲ್ಕಿ ಧನ್ವಂತ್ರಿ ಮೇಧಾವಿ ಪತಿಯ ಏವ
ಷಾದರೋಗಂಗಳನಳಿದು ಮಹ
ದಾದಿದೇವ ಜಗನ್ನಾಥ ವಿಠ್ಠಲ ಆದರದಿ ಪ್ರಹ್ಲಾದವರ 3
*********

No comments:

Post a Comment