Saturday 14 December 2019

ಸ್ಮರಿಸು ಸಂತತ ಹರಿಯನು ankita jagannatha vittala

ಜಗನ್ನಾಥದಾಸರು
ರಾಗ ಮಧ್ಯಮಾವತಿ (ಭೂಪ್) ಝಂಪೆತಾಳ

ಸ್ಮರಿಸು ಸಂತತ ಹರಿಯನು ಮನವೆ ||ಪ||

ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ
ಸರಸಿಯೊಳಗಂದು ಕರಿಯ ನರನ ಸಂ-
ಗರದೊಳಗೆ ಕಾಯ್ದುದರಿಯ
ಜಪ ಮ ವ್ರತ ದಾನ ತಪಕೆ ದೊರೆಯ ಜಗದೀಶ
ಶರಣು ಪೊಕ್ಕವರ ತೊರೆಯ ಖರೆಯ ||ಅ.ಪ||

ತಾನೆ ಇಹಪರ ಸೌಖ್ಯ ದಾಸಿಗಳರಸನೆಂದು
ಸಾನುರಾಗದಿ ನಂಬಿದ ಜನಕೆ ಸುರ-
ಧೇನುವಂದದಲಿ ಮೋದಸಲಿಸುವ ಮ-
ಹಾನಂದ ಪೂರ್ಣಬೋಧ ಪ್ರತಿಸಾಮ-
ಗಾನಲೋಲ ಪ್ರಸಾದ-ಪಾದ ||೧||

ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲೆ ನೆಲೆಸಿಹನು
ಬಲ್ಲಿದನು ಭಾಗ್ಯವಂತ ನಂಬಿದರಿ-
ಗಲ್ಲದೆ ಒಲಿಯ ಭ್ರಾಂತ-ದುಷ್ಟ ಜನ-
ರೊಲ್ಲ ನಿಶ್ಚಯ ಮಹಂತರೊಡೆಯ ಕೈ-
ವಲ್ಯದಾಯಕನ ಇಂಥ-ಪಂಥ ||೨||

ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು
ನೀಡಿ ನೀಡಿಸುವ ಪಿಡಿವ ಪಿಡಿಸುವನು
ಬೇಡಿ ಭೇಡಿಸುವ ಬಡವರೊಡೆಯ ಕೊಂ-
ಡಾಡುವರ ಒಡನಾಡುವ ಈ ಮಹಿಮೆ-
ಗೀಡೆಂದು ಆವ ನುಡಿವ-ಕೆಡುವ ||೩||

ಅಣುವಿನೊಳಗಣುವಹನು ಘನಕೆ ಘನತರನಹನು
ಅಣುಮಹದ್ವಿಲಕ್ಷಣ ಕಲ್ಯಾಣ ಗುಣಜ್ಞಾನ
ಘನ ಲಕ್ಷಣ-ಸಂಪೂರ್ಣ
ಮನಮುಟ್ಟಿ ಕರೆದಾಕ್ಷಣ ಬಂದೊದಗಿ
ಕುಣಿವ ಲಕ್ಷ್ಮೀವಕ್ಷನ-ಅನಪೇಕ್ಷಣ ||೪||

ಚೆಲುವರೊಳಗತಿಚೆಲುವ ಸುಲಭರೊಳಗತಿಸುಲಭ
ಒಲಿವ ಮನಬಂದ ತೆರದಿ , ಗುಣಕರ್ಮ
ಕುಲಶೀಲಗಳನೆಣಿಸನರಿದೀ ಭಕುತಿ
ಫಲವ ಕೊಡೆ ತಾ ತವಕದಿ ಶಬರಿ ಎಂ-
ಜಲನುಂಡ ಕರುಣಶರಧೀ-ಮರೆದೀ ||೫||

ಪ್ರಾದೇಶ ಮಾತ್ರ ಸ್ಥಿತ ಶ್ರೀದೇವಿಯರಸ ಕನ-
ಕೋದರಾದ್ಯಮರ ವ್ರಾತ ಸಹಿತ ಮಹ-
ದಾದಿ ಪೃಥ್ವ್ಯಂತ ಭೂತದೊಳು ನೆಲೆಸಿ
ಕಾದುಕೊಂಡಿಹ ವಿಧಾತ ಅಂಡತ್ರಿದ-
ಶಾಧಿಪನ ಸುತನ ಸೂತ-ಸ್ವರತ ||೬||

ಸ್ವಗತಭೇದ ವಿಶೂನ್ಯ ನಿಗಮ ಸಂಚಾರ ಶ್ರೀ
ಜಗನ್ನಾಥವಿಠಲರೇಯ ತನ್ನ ಪಾ-
ದಗಳ ಧ್ಯಾನಿಪರ ನೋಯಗೊಡದಂತೆ
ಹಗಲಿರುಳು ಕಾವ ಮಾಯಾರಮಣ ನಮ್ಮ -
ನಗಲಿ ಸೈರಿಸನು ಪ್ರಿಯ-ಧ್ಯೇಯ ||೭||
***


pallavi

smarisu santata hariyanu manavE

anupallavi

smarisu santata hariya karuNALugaLa dhoreya sarasiyoLagandu kariya narana sangaradoLage kAidu dariya japa hOma vrata dAna tapake doreya jagadIsha sharaNu pokkavarattoreya khareya

caraNam 1

tAnE ihapara saukhya dAsigaLa rasanendu
sAnurAgadi nambida janage suradhEnu vandadali mOdalisuva
mAhAnanda pUrNabOdha pratisAma gAnalOlana pradAsa pAda

caraNam 2

ellelli nODe mattallaLLe nalesihanu ballidanu bhAgyavanta
nambadarigalladE oliya bhrAnta duSTa janarolla nishcaya
mahantaroDeya kaivalya dAyakana intha pantha

caraNam 3

nODi nODisu tihanu mADi mADisu tihanu nIDi nIDisuva
piDiva piDisuvanu bEDi bEDisuva baDavaroDeya koNDADuvara
voLanADuva I mahimEgIDendu Ava nuDiva keDuva

caraNam 4

aNuvinoLagaNuvahanu ghanake ghanataranahanu aNu mahad-
vilakSaNa kalyANa guNa jnAna ghana lakSaNa sampUrNa
manamuTTi karedAkSaNa bandodagi kuNiva lakSmIvakSana anapEkSaNa

caraNam 5

celuvaroLagati celuva sulabharoLagati sulabha oliva mana banda teradi
guNa karma ula shIlagaLa nenisanaridI bhakuti phalava koDe tavakali
shabari enjalanuNDa karuNa sharadhI maredI

caraNam 6

prAdEsha mAtra sthita shrI dEva arasa kanakOda rAdyamara
vrAta sahita mahadAdi pratvyanta bhUtadOLi nelasi kAdu koNDiha
vidhAta aNDa tridashAdhipana sutana sUta svarata

caraNam 7

svagata bhEda vishUnya nigama sancAra shrI jagannAtha viThalarEya
tanna pAdagaLa dhyAnipara nOyagoDadantE hagaluruLu kAva
mAyA ramaNa namma nagali sairisanu priyadhyEya
***

ಸ್ಮರಿಸು ಸಂತತ ಹರಿಯನು ಮನವೇ ಪ

ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ
ಸರಸಿಯೊಳಗಂದು ಕರಿಯ ನರನ ಸಂಗರದೊಳಗೆ ಕಾಯ್ದು
ದೊರೆಯ ಜಗದೀಶ ಅ.ಪ.

ಪರ ಸೌಖ್ಯ ದಾನಿಗಳರಸನೆಂದು
ಸಾನುರಾಗದಿ ನಂಬಿದ ಜನಕೆ ಸುರ
ಮೋದ ಸಲಿಸುವ ಶ್ರೀಮ
ಪತಿ ಸಾಮ
ಗಾನ ಲೋಲನ ಪ್ರಸಾದಾ ಪಾದಾ 1

ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲಿ ನೆಲೆಸಿಹನು
ಬಲ್ಲಿದನು ಭಾಗ್ಯವಂತ ನಂಬಿದವರಿ
ಗಲ್ಲದೆ ಒಲಿಯ ಭ್ರಾಂತಾ ದುಷ್ಟ ಜನ
ರೊಲ್ಲ ನಿಶ್ಚಯ ಮಹಂತಾರೊಡೆಯ ಕೈ
ವಲ್ಯದಾಯಕನ ಇಂಥಾ ಪಂಥಾ 2

ಅಣುವಿನೊಳಗಣುವಹನು
ಘನಕೆ ಘನತರನಹನು
ಅಣು ಮಹದ್ವಿಲಕ್ಷಣಾ ಕಲ್ಯಾಣ
ಗುಣe್ಞÁನ ಘನಲಕ್ಷಣಾ ಸಂಪೂರ್ಣ
ಮನ ಮುಟ್ಟಿ ಕರೆದಾಕ್ಷಣಾ ಬಂದೊದಗಿ
ಕುಣಿವ ಲಕ್ಷ್ಮೀ ವಕ್ಷನಾ ಅನಪೇಕ್ಷನಾ 3

ಚೆಲುವರೊಳಗತಿ ಚೆಲುವ ಸುಲಭರೊಳಗತಿ ಸುಲಭ
ಒಲಿವ ಸರಿ ಬಂದ ತೆರದಿ ಗುಣಕರ್ಮ
ಕುಲಶೀಲಗಳನೆಣಿಸನರಿದೀ - ಭಕುತಿ
ಫಲವ ಕೊಡೆ ತಾ ತವಕದಿ ಶಬರಿ ಎಂ
ಶರಧಿ ಭರದೀ 4

ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು
ನೀಡಿ ನೀಡಿಸುವ ಪಿಡಿವಾ ಪಿಡಿಸುವನು
ಬೇಡಿ ಬೇಡಿಸುವ ಬಡವರೊಡೆಯ ಕೊಂ
ಡಾಡುವರ ಒಡನಾಡುವಾ ಈ ಮಹಿಮೆ
ಗೀಡೆಂದು ಆವ ನುಡಿವಾ ಕೆಡುವಾ 5

ಕೋದರಾದ್ಯಮರ ವ್ರಾತಾ ಸಹಿತ ಮಹ
ದಾದಿ ಪೃಥ್ವಂತ ಭೂತಾದೊಳು ನಿಲಿಸಿ
ಕಾದುಕೊಂಡಿಹ ವಿಧಾತಾ ಅಂಡತ್ರಿದ
ಶಾಧಿಪನ ಸೂತ ಸಚ್ಚರಿತಾ 6

ನಿಗಮ ಸಂಚಾರ ಶ್ರೀ
ಜಗನ್ನಾಥವಿಠಲರೇಯಾ ತನ್ನ ಪಾ
ದಗಳ ಧ್ಯಾನಿಪರ ನೋಯಾಗೊಡದಂತೆ
ಮಾಯಾ ರಮಣ ನಮ್ಮ
ನಗಲಿ ಸೈರಿಸನು ಪ್ರಿಯಾ ಧ್ಯೇಯಾ 7
*********

No comments:

Post a Comment