Friday 13 December 2019

ಕೃಷ್ಣ ಕೃಷ್ಣ ಎಂದಾದರೊಮ್ಮೆ ನೆನೆದರೆ ಮನಕೆ ankita hayavadana

ಶ್ರೀ ವಾದಿರಾಜರು ರಚಿಸಿದ ಕೃತಿ

ಕೃಷ್ಣಾ ಕೃಷ್ಣಾ ಎಂದಾದರೊಮ್ಮೆ ನೆನೆದರೆ ಮನಕೆ
ದುಃಖ ಉಂಟೇನ ಮನಸ/

ಇನ್ನಾರು ಜ್ಞಾನ ದಿಂದ ಹರಿಗುರು ಕಥನ
ಸೇವಿಸಿ ಸರ್ವಕಾಟಲ//

ನಾನೆ ನಾನೆನ್ನಬೇಡ ಸಾವಿಗೆ ಅಂಜಬೇಡ/
ಸತ್ ಸಂಗ ಬಿಡಲೀಬೇಡ/

ಹಿರಿ ಗುರು ಕಥನ ಎಂದಿಗೂ ಮರೆಯಬೇಡ//೧//

ಶ್ರೀ ಕೃಷ್ಣ ಸೃಷ್ಟಿ ಕರ್ತ ಪುಟ್ಟಿಸಿ ಮಾಡುತಿಹ
ಇನ್ನೊಬ್ಬ ದಾವನಾರು ಅಜಭವ ಪಿತನೆಂದು/
ಒಬ್ಬನೆ ಕರೆಸಿಕೊಂಡ//

ತಾನೆ ಮೀನಾಗಿ ಬಂದು ಹೋಗಿ ದೈತ್ಯರ ಕೊಂದ
ಪ್ರಳಯ ಜಲಧಿಯೊಳ್ ಕೊಂಡಿಗೆಲವು ಕಟ್ಟಿ

ವೇದ ಉದ್ಧಾರ ಮಾಡಿ ತಾನೇ ತನ್ನ ವಿಶ್ವರೂಪ
ಮುನಿ ಮುನಿಗಳಿಗೆ ತೋರಿಸಿ ಕ್ರೀಡೆಯಿಂದ/

ಅಲ್ಲಿದಂತ ಮಚ್ಛ ಮೂರುತಿ ಸಕಲ ದುರಿತವು
ನಾಶಮಾಡೋ ಹಯವದನ//
**********

ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.

No comments:

Post a Comment