Wednesday 22 December 2021

ಏಕೆ ಮಮತೆ ಕೊಟ್ಟು ದಣಿಸುವಿ ರಂಗ ankita gopala vittala EKE MAMATE KOTTU DANISUVI RANGA








ಏಕೆ ಮಮತೆ ಕೊಟ್ಟು ದಣಿಸುವಿ ರಂಗ

ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ–
ಗೆನ್ನನೊಪ್ಪಿಸುವುದು ನೀತವೆ
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ
ನಿನ್ನ ನೇಮಕೆ ಪ್ರತಿಕೂಲನೆ || ೧ ||

ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ
ತನುವ್ಯಾರೊ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿ೦ದಿನ ದೇಹದ೦ತಲ್ಲವೆ || ೨ ||

ಇ೦ದ್ರಿಯ೦ಗಳು ವಿಷಯದಿ೦ದ ತೆಗೆಯಲು
ಗೋವಿ೦ದ ಎನ್ನ ವಶಕೆ ಬಾರವೊ
ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
ಬ೦ಧಕಶಕುತಿಗೆ ನಮೋ ನಮೋ || ೩ ||

ಅರಿತು ಅರಿತು ಎನಗರೆಲವವಾದರು
ವಿರಕುತಿವಿಷಯದಿ ಬಾರದು
ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ
ಮರುಳು ನೀಗುವ ಬಗೆಗಾಣೆನೊ || ೪ ||

ಎ೦ದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ
ಅ೦ದೆ ಉದ್ಧರಿಸಯ್ಯ ಕರುಣಿಯೆ
ಸು೦ದರ ವಿಗ್ರಹ ಗೋಪಾಲವಿಠಲ ಸುಖ
ಸಾ೦ದ್ರ ಭವಮೋಚಕ ನಮೋ ನಮೋ || ೫ ||
***

Eke mamate kottu danisuvi ranga
Ni karunadi enna paliso krushna || pa. ||

Ninna hambalisade anya vishayagali-
Gennanoppisuvudu nitave
Mannisi dayadi ni enna palisalu na
Ninna nemake pratikulane || 1 ||

Tanuvu tannadu alla tanu sambandhigalembo
Tanuvyaro tanyaro avarige
Dhana modalada vishayagala anubava
Himdina dehada0tallave || 2 ||

Imdriyamgalu vishayadi0da tegeyalu
Govimda enna vasake baravo
Imdire arasa brahmadivandita ninna
Bandhakasakutige namo namo || 3 ||

Aritu aritu enagarelavavadaru
Virakutivishayadi baradu
Karunasagara ninna marehokkallade
Marulu niguva bageganeno || 4 ||

Endige ninna cittakke baruvudo svami
Ande uddharisayya karuniye
Sundara vigraha gopalavithala suka
Sandra bavamocaka namo namo || 5 ||
***

ಏಕೆ ಮಮತೆ ಕೊಟ್ಟು ಧಣಿಸುವಿ ರಂಗ| 
ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ ||ಪ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ| 
ಗೆನ್ನನೊಪ್ಪಿಸುವುದು ನೀತವೆ| 
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ| 
ನಿನ್ನ ನೇಮಕೆ ಪ್ರತಿಕೂಲನೆ ||೧||

ತನುವು ತನ್ನದು ಅಲ್ಲ ತನುಸಂಬಂಧಿಗಳೆಂಬೋ| 
ತನುವ್ಯಾರೊ ತಾನ್ಯಾರೊ ಅವರಿಗೆ| 
ಧನ ಮೊದಲಾದ ವಿಷಯಗಳ ಅನುಭವ ಹಿಂ| 
ದಿನ ದೇಹದಂತಲ್ಲವೆ ||೨||

ಇಂದ್ರಿಯಂಗಳು ವಿಷಯದಿಂದ ತೆಗೆಯಲು ಗೋ| 
ವಿಂದ ಎನ್ನ ವಶಕೆ ಬಾರವೊ| 
ಇಂದಿರೆ ಅರಸ ಬ್ರಹ್ಮಾದಿವಂದಿತ ನಿನ್ನ| 
ಬಂಧಕ ಶಕುತಿಗೆ ನಮೋನಮೋ ||೩||

ಅರಿತು ಅರಿತು ಎನಗೆದವಲಾದರು| 
ವಿರಕುತಿ ವಿಷಯದಿ ಬಾರದು| 
ಕರುಣಸಾಗರ ನಿನ್ನ ಮೊರೆಹೊಕ್ಕಲ್ಲದೆ| 
ಮರುಳು ನೀಗುವ ಬಗೆಗಾಣೆನೊ ||೪||


ಎಂದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ| 
ಅಂದೆ ಉಧ್ಧರಿಸಯ್ಯ ಕರುಣಿಯೆ| 
ಸುಂದರ ವಿಗ್ರಹ ಗೋಪಾಲವಿಠ್ಠಲ ಸುಖ| 
ಸಾಂದ್ರ ಭವಮೋಚಕ ನಮೋ ನಮೋ ||೫||
**********

ಏಕೆ ಮಮತೆ ಕೊಟ್ಟು ಧಣಿಸುವಿ ರಂಗ| ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ ||ಪ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ| ಗೆನ್ನನೊಪ್ಪಿಸುವುದು ನೀತವೆ| ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ| ನಿನ್ನ ನೇಮಕೆ ಪ್ರತಿಕೂಲನೆ ||೧||

ತನುವು ತನ್ನದು ಅಲ್ಲ ತನುಸಂಬಂಧಿಗಳೆಂಬೋ| ತನುವ್ಯಾರೊ ತಾನ್ಯಾರೊ ಅವರಿಗೆ| ಧನ ಮೊದಲಾದ ವಿಷಯಗಳ ಅನುಭವ ಹಿಂ| ದಿನ ದೇಹದಂತಲ್ಲವೆ ||೨||

ಇಂದ್ರಿಯಂಗಳು ವಿಷಯದಿಂದ ತೆಗೆಯಲು ಗೋ| ವಿಂದ ಎನ್ನ ವಶಕೆ ಬಾರವೊ| ಇಂದಿರೆ ಅರಸ ಬ್ರಹ್ಮಾದಿವಂದಿತ ನಿನ್ನ| ಬಂಧಕ ಶಕುತಿಗೆ ನಮೋನಮೋ ||೩||

ಅರಿತು ಅರಿತು ಎನಗೆದವಲಾದರು| ವಿರಕುತಿ ವಿಷಯದಿ ಬಾರದು| ಕರುಣಸಾಗರ ನಿನ್ನ ಮೊರೆಹೊಕ್ಕಲ್ಲದೆ| ಮರುಳು ನೀಗುವ ಬಗೆಗಾಣೆನೊ ||೪||


ಎಂದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ| ಅಂದೆ ಉಧ್ಧರಿಸಯ್ಯ ಕರುಣಿಯೆ| ಸುಂದರ ವಿಗ್ರಹ ಗೋಪಾಲವಿಠ್ಠಲ ಸುಖ| ಸಾಂದ್ರ ಭವಮೋಚಕ ನಮೋ ನಮೋ ||೫||
*********

No comments:

Post a Comment