Thursday 26 December 2019

ವ್ಯಾಸ ಬದರಿನಿವಾಸ ankita vijaya vittala vedavyasa stutih

ವ್ಯಾಸ ಬದರಿನಿವಾಸ ಎನ್ನಯಕ್ಲೇಶ ನಾಶನಗೈಸು ಮೌನೀಷ
ಸಾಸಿರ ಮಹಿಮನ ದೋಷರಹಿತ
ಸುರ ಭೂಸುರ ಪರಿಪಾಲ ಶಾಶ್ವತ ವೇದ ||ಪ||

ಸತ್ಯವತಿ ವರಸೂನು ಭವತಿದುರ ಭಾನು
ಭೃತ್ಯವರ್ಗದ ಸುರಧೇನು
ಸತ್ಯಮೂರುತಿಯು ನೀನು ಸ್ತುತಿಪೆ ನಾನು
ನಿತ್ಯ ನಿನ್ನಂಘ್ರಿಯರೇಣು
ಉತ್ತಮಾಂಗದಲಿ ಹೊತ್ತು ಹೊತ್ತಿಗೆ
ಸೂಸುತ್ತಿರತಿಗದು ಅತ್ಯಂತ ಸುಖಕರ
ಸುತ್ತುವ ಸುಳಿಯಿಂದೆತ್ತಿ ಕಡೆಗೆಯಿಡು
ಎತ್ತ ನೋಡಲು ವ್ಯಾಪುತ ಸದಾಗಮ || ೧ ||

ಲೋಕ ವಿಲಕ್ಷಣ ಋಷಿ ಗುಣವಾರಿ |
ರಾಸಿ ವೈಕುಂಠ ನಗರ ನಿವಾಸಿ
ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ
ಬೇಕೆಂದು ಭಜಿಪೆ ನಿಲಿಸಿ
ಶೋಕ ಮಾಡುವುದು ಅನೇಕ ಪರಿಯಿಂದ
ಆ ಕುರುವಂಶದ ನಿಕರ ತರಿಸಿದೆ
ಭೂಕಾಂತರು ನೋಡೆ ಸಾಕಾರ ದೇವ
ಕೃಪಾಕರ ಮುನಿ ದಿವಾಕರಭಾಸ || ೨ ||

ಸ್ಮರಿಸಿದವರ ಮನೋಭಿಷ್ಟ
ವಾಶಿಷ್ಟ ಕೃಷ್ಣ
ನಿರುತ ಎನ್ನಯ ಅರಿಷ್ಟ
ಪರಿಹರಿಸುವುದು ಕಷ್ಟದೊಳತ್ಕ್ರುಷ್ಟ
ಮೆರೆವ ಉನ್ನತ ವಿಶಿಷ್ಟ
ಸುರನರ ಉರಗ ಕಿನ್ನರ ಗಂಧರ್ವರೂ
ಕರಕಮಲಗಳಿಂದ ವರಗೊಂಬ
ಸಿರಿ ಅರಸನೆ ನಮ್ಮ ವಿಜಯವಿಠಲ ಪರ
ಶರಸುತ ಬಲು ವಿಸ್ತಾರ ಜ್ಞಾನಾಂಭುದೆ || ೩ ||
*******

No comments:

Post a Comment