Thursday 26 December 2019

ರಾಜರೆಂದರೆ ಶ್ರೀಪಾದರಾಜರಯ್ಯ ankita shyamasundara sripadaraya stutih

ರಾಜರೆಂದರೆ ಶ್ರೀಪಾದರಾಜರಯ್ಯ |
ರಾಜೀವ ಲೋಚನ ರಂಗವಿಠ್ಠಲ ಭಜಕ || ಪ ||

ಸ್ಮರಣೆ ಮಾತ್ರದಿ ಅನ್ನ ವಸನಗಳನೀಯುತಲಿ |
ಹರಿಭಕ್ತಿ ಹರಿಜ್ಞಾನ ಭಕ್ತಿಯನು ಕರುಣಿಸುವರು |
ಭರದಿ ದಾರಿದ್ರ್ಯವನು ಪರಿಹಾರ ಮಾಡುತಲಿ |
ನಿರುತ ಧರ್ಮದಿ ನಡೆವ ಮನವಿತ್ತು ಸಲಹುವ || ೧ ||

ವರ ವಾದಿರಾಜ ವ್ಯಾಸ ವಿಜಯೀಂದ್ರರಿಗೆ |
ಪರವಿದ್ಯೆ ವೈರಾಗ್ಯ ಭೋಧಿಸುತಲಿ ||
ಧರಣಿಯೊಳು ಹರಿದಾಸ ಮಾರ್ಗದಲಿ ನಡೆಸಿದ |
ಪರಮ ಕಾರುಣ್ಯ ಗುರು ನರಹರಿ ಪ್ರೀಯರು || ೨ ||

ಚತುಃಷಷ್ಠಿ ಶಾಖಗಳನ್ನು ನಿಷ್ಠೆಯಿಂದಲಿ ತಾವೇ |
ಪರಮೇಷ್ಠಿ ಪಿತನಿಗೆ ಅರ್ಪಿಸುತಲಿ |
ಕಷ್ಟಕಾರ್ಪಣ್ಯಗಳ ಏನೊಂದು ಭರಿಸದಲೆ |
ಸೃಷ್ಠೀಶನಂಘ್ರಿಯನು ನಿತ್ಯ ಭಜಿಸುತ ಮೆರೆವ || ೩ ||

ಇವರ ಮಹಿಮೆಗಳನ್ನು ಪೊಗಳಲೆನ್ನಳವಲ್ಲ |
ಕವಿತೆ ಸಾಹಿತ್ಯದಲಿ ಕುಲಗುರುಗಳು |
ಧ್ರುವನ ಅವತಾರಿಗಳು ಸಂದೇಹ ಇನಿತಿಲ್ಲ |
ಪವಮಾನ ಜನಕ ಗುರು ಶ್ಯಾಮಸುಂದರಪ್ರೀಯರು || ೪ ||
********

No comments:

Post a Comment