Friday 27 December 2019

ಭೂತರಾಜ ಭೂತರಾಜ ಭೂತರಾಜ ಜೈ ಜೈ ಜೈ others

ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ|| ಪ||

ಖ್ಯಾತ ವಾದಿರಾಜ, ಗುರುವ | ಪ್ರೀತಿಪಾತ್ರ
ಭಾವಿರುದ್ರ ಜೈ ಜೈ ಜೈ ||ಅ.ಪ||

ಮೂಲ ಹರಿಯ ನಾಮ ಧರಸಿ | ವ್ಯಾಳ ವಿನುತ ಗುರುವಿನಲ್ಲಿ
ಶೂಲಿ ಯಂತೆ ವಿದ್ಯೆ ಘಳಿಸಿ | ಕಾಳ ಮನದಿ ಮೆರೆದ ಮುನಿಗೆ ಜೈ ಜೈ ಜೈ ||1||

ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ |
ಗುರುಗಳನ್ನು ಬಿಡದೆ ಬೆದಕಿ, ಪುರದಲಾದೆ  ಬೊಮ್ಮರಕ್ಕಸ ಜೈ ಜೈ ಜೈ ||2||

ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ |
ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ||3||

ಏನು ನಿನ್ನ ಜ್ಞಾನ ಮಾನ, ಹೀನ ಜನ್ಮ ಬಂದರೂನು |
ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ||4||

ಕರುಣ ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ |
ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ ||5||

ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ |
ಅಮರನಾಥ ಗುರುವು ನೀನು, ನಮಗೆ ಮಗನು ಸುಖದಿ ಬಾಳೆಂದು||6||

ನಾರಸಿಂಹ ನಿನ್ನ ಬಿಂಬ, ಭಾರಿ ಗಾತ್ರ ಕೆಂಪು ನೇತ್ರ |
ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ ||7||

ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು |
ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ ||8||

ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ
ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ ||9||

ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ
ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ||10||

ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ
ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ||11||

ಶೃಂಗ ಪುರದಿ ಖಳರ ಸೊಕ್ಕು ಭಂಗ ಗೈದು ನಿಂತೆ ಅಲ್ಲ
ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ||12||

ಗುರುವು ಕೊಟ್ಟ ನೂಪೂರಾವ, ಧರಿಸಿ
ಕುಣಿದು ಮುದದಿ ಭಜಿಪೆ
ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ||13||

ಸ್ವಾದಿ ಕ್ಷೇತ್ರದಲ್ಲಿ ನೆಲಸಿ | ವಾದಿರಾಜ ವೈರಿ ವೃಂದ
ಬೂದಿಗೈದು ಭಕ್ತಿಗಣಕೆ, ಮೋದ ಕೊಡಿಸು ತಿರ್ಪೆಭೂಪ |ಜೈ||14||

ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ
ರಾಜ ದಯದಿ ಮೆರೆವ ನಿನ್ನ | ನೈಜ ಮಹಿಮೆ  ಅಳಿಯೆ ಸಿಗದು ಜೈ ||15||

ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ |
ಕುಂದು ರಹಿತ ಹರಿಯ ಯಜಿಸಿ, ಇಂದು ಉಂಬೆ ದಿವ್ಯ ಪದವಿ||16||

ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ |
ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ||17||

ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ
ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ||18||

ಕರ್ಣ ಆವಿ ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು |
ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ||19||

ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ
ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ||20||

ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ |
ನಾಥ ಶ್ರೀ  ಕೃಷ್ಣ ವಿಠಲ, ಪ್ರೀತಿ ಯಿಂದ ನಲಿದು  ನಲಿವ ಜೈ ಜೈ ಜೈ ||21||
**********

No comments:

Post a Comment