Wednesday 16 October 2019

ಸೇರಿದೆನೊ ಬಂದು ಸಂಕಟದಲಿ ನೊಂದು ankita vijaya vittala

ಶ್ರೀ ವಿಜಯದಾಸರು ರಚಿಸಿದ ಆಪತ್ತು ಪರಿಹಾರ ಸ್ತೋತ್ರಂ.

ಸೇರಿದೆನೊ ಬಂದು ಸಂಕಟದಲಿ ನೊಂದು
ತಾರಿ ತುಟಿಯಾರಿ ದಾನವಾರಿ/

ಘೋರವಾದ ಕ್ರೂರರು ಒಳಗೆ ಈ--
ವಾರು ಒಂದಾಗಿ ಮೆದ್ದಾರು ಚೆನ್ನಾಗಿ/

ನೂರು ನೂರು ಬೇರು ಒಲ್ಲೆನೆಂದರೆ ಮೂರು
ಬಾರಿ ಕುಡಿಸಿದರು ಒಂದೊಂದು ಸೇರು

ಪುರಾತನ ನಾಮ ವಿಜಯವಿಠ್ಠಲ ಪ್ರೇಮ/
ಆರೈದು ಸಲಹುವವರ ಕಾಣೆ ಬಲ್ಲವರ/

ನಾರಾಯಣ ನೆಂಬ ವೀರವೈದ್ಯನ ಕಂಡೆ/
ಕಾರುಣ್ಯದಲಿ ತನ್ನ ಚರಣಾಂಬಿಲಿ ಚಿಂ/

ತಾರತುನ ಮಾತ್ರೆ ಅರೆದು ಪೂರ್ಣವಾಗಿ
ಕರ ಕೊಟ್ಟನು ನೋಡು ಕರದು ಸಮೀಪಕ್ಕೆ/

ಶಾರೀರವೆ ಉಂಡು ಎದಿಗೆ ಹತ್ತಿದ ಮದ್ದು/
ಕಾರಿಸಿತು ಬಹು ವ್ಯಾಪ್ತವಾಗಿದ್ದದ್ದು/

ಪೂರಾಯಿತೆ ನಾಮಾ ವಿಜಯವಿಠ್ಠಲ ಮುಂದೆ/
ಪೊರೆವ ದುರುಳರು ಸೇರದಂತೆ ಒಲಿದು//

ಬಹು ದಿನದಲಿ ಇದ್ದ ಭವರೋಗ ಹಿಂಗಿತು/
ಸಹಿ ವಿಷ್ಣು ವಿಜಯವಿಠ್ಠಲ ವೈದ್ಯನಿಂದಲಿ//.

ಓಂ ಧಂ ಧನ್ವಂತರಿಯೆ ನಮಃ//.
*********


No comments:

Post a Comment