Wednesday 16 October 2019

ಮುನಿಯ ನೋಡಿರೊ ವಂದನಿಯ ಮಾಡಿರೊ ankita vijaya vittala

ವಿಜಯದಾಸ
ಮುನಿಯ ನೋಡಿರೊ ವಂದನಿಯ ಮಾಡಿರೊ
ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ

ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ
ತೊಳೆದ ಜಲವು ಬೀಳಲಾಕ್ಷಣ
ಹಲುಬಿಕೊಳುತಲಳಿದು ಪೋಗೋವು 1

ಹಿಂದೆ ವ್ಯಾಸ ಮುನಿಗಳಿಂದ
ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ
ವಿಂದ ಒಡೆಯನೀತ 2

ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ
ಮುದದಿ ತಿಳಿದು ಮಾಯಿ ಶಾಸ್ತ್ರ
ವೊದೆದು ಕಳೆದ ನಿಜ ಸದಮಲ ಸಮರ್ಥ 3

ಮಧ್ವಮತಾಂಬುಧಿಯೊಳು ಪುಟ್ಟಿ
ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ
ಊಧ್ರ್ವ ಲೋಕದಲ್ಲಿ ಮೆರೆದ4

ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ
ವೇಲೂರ ಪುರಪಯೋನಿಧಿವಾಸ ಜಗದ
ದೊರೆ ವಿಜಯವಿಠ್ಠಲನ್ನದಾಸ5
********

No comments:

Post a Comment