Thursday 17 October 2019

ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ankita vijaya vittala

ದುರಿತ ಗಜಕೇಸರಿಯೆ ತ್ರಿಲೋಕದ
ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ |
ಕರುಣವ ಮಾಡಿ ಪರಿಯಲಿ ಸಾರಂಗ |
ಧರನೆ ಧರಣಿಧರ ವರ ಪರಿಯಂತಾ ಪ

ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು |
ಹೇಮ ಮುನೀಶ್ವರ ಕಾಮಿಸಿ ಹರಿಪಾದ |
ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ ||
ಸಾಮಜವರದನ ನಾಮವ ನೆನೆಯಲು |
ಹೇಮ ತೀರಥದೊಳು |
ತಾ ಮನಗೊಂಬ ನಾಮನೆ ಪಡೆದು 1

ಮಂಗಳಾಂಗಿಯೇ ಬರಲು ರಂಗರಾಯನು ಸಾ |
ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು |
ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ |
ತುಂಗ ಮಹಿಮ ವಿಹಂಗಾದಿಗಳಿಂದ
ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ 2

ಜಯ ಕುಂಭಘೋಣನಿಲಯಾನೆನೆಸುವ ಉ |
ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ |
ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ |
ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ |
ನಯನ ಮೀತಾರ ಪಾಲಯಪಾವನದೇವಾ |
ದಯಮುಖ ಹರಾ ವಿಜಯವಿಠ್ಠಲಪರಾ 3
**********

No comments:

Post a Comment