Wednesday 16 October 2019

ದಯಬಾರದ್ಯಾಕೊ ರಾಘವಾ ಕಾಯಬೇಕು ankita vijaya vittala

ದಯ ಬಾರದ್ಯಾಕೊ ರಾಘವಾ ಪ

ಕಾಯಬೇಕು ಯೆಂದು ಕೊರಗಿ ಮೊರೆಯಿಡೆ
ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ

ಅಂದು ಅಜಮಿಳನು ಅಂತ್ಯಕಾಲದಲ್ಲಿ
ಕಂದ ನಾರ ಬಾಯೆಂದು ಕರಿಯಲು
ಅಂದ ಮಾತುಗಳಿಗೆ ಅತಿ ಹರುಷಿಸಿ
ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1

ಹರಿಯೆ ಗತಿಯೆಂದು ಹೊಗಳು ಕಂದನ
ಹರುಷವಿಲ್ಲದೆ ಪಿತ ಕಷ್ಟಪಡಿಸಲು
ಊರು ತೋರದಂತಾ ಸ್ತಂಭದಿಂದ ಬಂದು
ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2

ಸರ್ಪಶಯನನೆ ಸಾರ್ವಭೌಮನೆ
ನಾಸಿಕ ಶ್ರೋತ್ರವಳಿದನೇ
ಅಪ್ಪ ಗುರುವರ ವಿಜಯವಿಠ್ಠಲನೇ
ಒಪ್ಪದಿಂದ ವಲಿವ ವರದರಾಜನೇ 3
********

No comments:

Post a Comment