Thursday 17 October 2019

ನರಕ ಎತ್ತಣದೋ ನರಕ ಎತ್ತಣದೋ ankita vijaya vittala

ನರಕ ಎತ್ತಣದೋ ನರಕ ಎತ್ತಣದೋ
ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ

ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ
ದಾನ ಧರ್ಮಂಗಳು ಮಾಡಲೇಕೆ
ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ
ತ್ರಾಣದಲಿ ಬಿಡದೆ ಎಣಿಸುವ ಜನರಿಗೆ1

ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ
ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ
ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ
ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ 2

ದೀಪ ಧೂಪಗಳೇಕೆ ನಾನಾ ಪರಿಯಲ್ಲಿ
ಸೋಪಸ್ಕರದ ಎಡೆ ಇಡಲೇತಕೆ
ಅಪಾರ ಮಹಿಮ ಅನಾಥರೊಡೆಯ ರಂಗ
ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ 3

ಭೂತದಯಗಳೇಕೆ ನೀತಿ ಎಂಬುದು ಏಕೆ
ಜಾತವೇದಸನಲ್ಲಿ ಕಳವಳವೇಕೆ
ಪಿನಾಕಿ ಸಖನೆಂದು
ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ 4

ಏನೇನು ಕರ್ಮದಾಚರಣೆ ಮಾಡುವದೇಕೆ
ಭಾನು ಉದಯವಿಡಿದು ತೊಳಲಲೇಕೆ
ದೀನನಾಗಿ ದಾತಾ ವಿಜಯವಿಠ್ಠಲ ಹರಿಯ
ಮಾನಸದಲಿ ಧ್ಯಾನ ಮಾಡುವ ಜನರಿಗೆ 5
*********

No comments:

Post a Comment