Thursday 17 October 2019

ಮನ್ನಿಸು ಮಾರಾರಿ ಮುದದಿಂದಲಿ ಎನ್ನ ankita vijaya vittala

ವಿಜಯದಾಸ
ಮನ್ನಿಸು ಮಾರಾರಿ ಮುದದಿಂದಲಿ ಎನ್ನ |
ಯಿನ್ನು ದುರಿತಗಳನ್ನ ಹಾರಿಸಿ |
ಎನ್ನನನುದಿನ ಪ

ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ |
ಹಮ್ಮಿನಿಂದಿತ್ತ ಸರ್ವವ ನೋಳ್ಪನೆ |
ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ |
ಉಮ್ಮೆಯರಸಾ ತಾಮಸ ಕಾರ್ಯದಧಿಪತಿ |
ಒಮ್ಮೆ ಬಿಡದಲೆ ನರಹರಿಯ ನಾ |
ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ |
ಅಮ್ಮಹಾ ವೈರಾಗ್ಯ ಭಾಗ್ಯವ |
ಕಮ್ಮರದಿ ಕೊಡು ಕರುಣದಿಂದಲಿ 1

ನಂದಿವಾಹನ ನಾಗತಲ್ಪ ಕಲ್ಪಾಂತರ |
ಚಂದಿರಮವ್ಯಾಳಿ ಚರ್ಚಕನಾಯಕ |
ಕುಂದುಗೊರಳ ನೀಲಕಂಠಾಗಮನೈಯ್ಯ |
ವಂದೀರೈದು ಸ್ಥಾನ ವಾಸವಾದ್ಯ ||
ಇಂದು ನಿನ್ನ ಪಾದದ್ವಂದ್ವ ನಂಬಿದೆ |
ನಿಂದಕರ ಸಂಗತಿ ಸಂಗತಿಯಲಿಡದಲೇ |
ಪೊಂದಿಸೋಮ ಜನರೊಳಗೆ ಎರ |
ಡೊಂದುಪುರ ವಿನಾಶಾ ಈಶಾ 2

ನಿಖಿಳ ಶಾಂತ |
ನಿಟಿಲನೇತ್ರ |
ಮಂಗಳಾಂಗ ಶ್ರೀ ವಿಜಯವಿಠ್ಠಲನ |
ಹಿಂಗದೆ ಮನದಲ್ಲಿ ನೆನೆಸುವರ |
ಸಂಗಸುಖ ಸರ್ವದಾ ಸುಜನಪಾಲಕ |
ಪೊಂಗರ್ಭಸುತ ಪತಿತ ಪಾವನ 3
*********

No comments:

Post a Comment