Wednesday 16 October 2019

ಪಾಹಿ ಮೋಹನ ವಿಠಲ ಪರಮಕರುಣಾಜಲಧಿ ankita vijaya vittala

ವಿಜಯದಾಸ
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ
ಮಹದಾದಿ ದೇವ ವಂದ್ಯ |
ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು
ರಹಸ್ಯಮತಿ ಕೊಡುವುದು ಸ್ವಾಮಿ ಪ

ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ
ಅನಂತ ಜನುಮವಾಗೆ
ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು
e್ಞÁನಿಗಳಿಗರಿವಾಗಿದೆ
ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ
ಮಾನವನ ಕ್ಲೇಶಕೆಣಿಯೆ
ಆನಂದ ನಂದನನೆ ತೃಣವ ಪಿಡಿದು ರುತುನ
ವನು ಮಾಡಿ ತೋರುವ ಸ್ವಾಮಿ 1

ನಿನ್ನಧೀನ ಕರ್ಮಸ್ವಭಾವ ಮೊದಲಾಗಿ
ಅನ್ಯಥಾ ಯಲ್ಲಿ ಕಾಣೆ
ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ
ಬಿನ್ನಪವ ಬರಿದೆನಿಸದೆ
ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ
ನಿನ್ನ ದಾಸನ ದಾಸನು
ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ
ಸನ್ನನಾಗೋ ಪಾವನ್ನರನ್ನ 2

ನರರಿಗೆ ಸಾಧನ ಸತ್ಕೀರ್ತನೆ ಎಂದು
ಪರಮೇಷ್ಠಿ ಒರೆದನಿದಕೊ
ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ
ದುರಿತ ಬೆಮ್ಮೊಗವಾಗವು
ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ
ಶರಣರೊಳಗಿಟ್ಟು ಕಾಪಾಡು
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ
ಪರಿಪೂರ್ಣವಾಗಿ ಇರಲಿ ಸ್ವಾಮಿ3
******

ಶ್ರೀ ವಿಜಯರಾಯರು 
" ಅಂಕಿತ ಪದ " 
ರಾಗ : ಕಲ್ಯಾಣಿ ತಾಳ : ಝಂಪೆ 

ಪಾಹಿ ಮೋಹನ ವಿಠಲ -
ಪರಮ ಕರುಣಾ ಜಲನಿಧೆ ।
ಮಹದಾದಿ ದೇವ ವಂದ್ಯ ।
ಮೋಹ ಪಾಶವ ಬಿಡಿಸಿ -
ನಂಬಿದವಗೆ ವೊಲಿದು ।
ರಹಸ್ಯ ಮತಿ ಕೊಡುವುದು -
ಸ್ವಾಮಿ ।। ಪಲ್ಲವಿ ।। 

ನೀನಿತ್ತ ಮಾತುಗಳು -
ಪೊಳ್ಳಗ ಬಲ್ಲವೇ ।
ಅನಂತ ಜನಮದಾಗೆ ।
ಆನೊಬ್ಬ ನೆನ್ನದಿರು । -
ಕೀರ್ತಿಸು ।
ವ ನರನೆಂದು ಜ್ಞಾನಿ-
ಗಳಿರುದಾಗಿದೆ ।।
ಏನಯ್ಯಾ ನಿನ್ನಂಘ್ರಿ -
ಭಜಿಸದಿಪ್ಪ ।
ಮಾನವನ ಕ್ಲೇಶಕೆಣಿಯೆ ।
ಆನಂದ ನಂದನೆ -
ತೃಣವ ಪಿಡಿದು । ರ ।
ತುನವನು ಮಾಡಿ ತೋರುವ -
ಸ್ವಾಮಿ ।। ಚರಣ ।। 

ನಿನ್ನಧೀನ ಕರ್ಮ -
ಸ್ವಭಾವ ಮೊದಲಾಗಿ ।
ಅನ್ಯಥಾ ಎಲ್ಲಿ ಕಾಣೆ ।
ಮನ್ನಿಪುದು ಮುದದಿಂದ -
ಮೋದದಲ್ಲಿ ।
ಎನ್ನ ಬಿನ್ನಪವನು -
ಬಿರಿದೆನಿಸಿದೆ ।।
ಅನ್ಯರಿದರೊಳಗಿಲ್ಲ -
ಯೆನ್ನ ಪೊಂದಿದವನು ।
ನಿನ್ನ ದಾಸರ -
ದಾಸರು ಉನ್ನತ ।
ಗುಣವಿತ್ತು ಉರು-
ಕಾಲ ವೊಲಿದು ।
ಪ್ರಸನ್ನನಾಗೋಪಾವನ್ನಾ -
ರನ್ನಾ ।। ಚರಣ ।। 

ನರರಿಗೆ ಸಾಧನಾ -
ಸತ್ಕೀರ್ತನೆಯೆಂದು ।
ಪರಮೇಷ್ಠಿ ಒಲಿಪನಾಹಕೊ ।
ಪರಿ ಪರಿಯಿಂದ -
ಕರ್ಮಗಳ ಮಾಡಿದರೆ ।
ದುರಿತ ಬೆಮ್ಮೊಗವಾಗವು ।।
ಪಿರವಾಗಿ ಬೇಡಿದೆನೋ -
ವಿಜಯವಿಠ್ಠಲ ನಿನ್ನ ।
ಶರಣರೊಳಗಿಡು ಕಾಪಾಡು ।
ಸ್ಥಿರವಾಗಿ ಅಂಕಿತವ -
ಪ್ರೇರಿಸಿ ಕೊಡಿಸಿದ್ದು ।
ಧರೆಯೊಳಗೆ ಪರಿಪೂರ್ಣ-
ವಾಗಿ ಇರಲಿ ಸ್ವಾಮಿ ।। ಚರಣ ।। 
*****

No comments:

Post a Comment