Thursday 17 October 2019

ವೇಣುಗೋಪಾಲವಿಠ್ಠಲರೇಯ ನಿನ್ನ ಪದರೇಣು ನಂಬಿದ ankita vijaya vittala

ವಿಜಯದಾಸ
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ
ರೇಣು ನಂಬಿದ ಮಾನವ
ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ
ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ

ಪರದೈವ ನೀನೆಂದು ಮೂಢಮತಿಯಾದವನು |
ಪರಿಪೂರ್ಣವಾಗಿ ನಿರುತ |
ನೆರೆ ನಂಬಿದೆನು ನಾನಾ ಪ್ರಕಾರದಲಿ
ಸ್ಮರಣೆ ಮಾಡುತ ಮನದಲಿ |
ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ
ಸ್ತರ ಮಾಡು ಇವನ ಕೀರ್ತಿ
ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ
ಕರಪಿಡಿದು ಪಾಲಿಸುವುದು ಸ್ವಾಮಿ1

ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ |
ಸಾಕುವುದು ಸಾಕಾರನೆ
ನೂಕು ದುರಳದಿಂದ ಬಂದ ವಿಪತ್ತುಗಳ
ತಾಕಗೊಡದಂತೆ ವೇಗ
ಶುಭ |
ವಾಕು ನೇಮಿಪುದು ಸತತ
ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ
ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ 2

ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು |
ಸರ್ವರನು ಈ ವಿಧದಲಿ |
ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ
ನಿವ್ರ್ಯಾಜದವನ ಮಾಡಿ
ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ
ಸರ್ವದಾ ಕೃಪೆಮಾಡು ಎಂಬೆ
ಸಿರಿ ವಿಜಯವಿಠ್ಠಲ ನಿನ್ನ
ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ 3
***********

No comments:

Post a Comment