Wednesday 16 October 2019

ಯಾವದು ಸುಖವೇ ಮತ್ಯಾನಂದವೇ ಉಡುಪಿಯ ankita vijaya vittala

ವಿಜಯದಾಸ
ಯಾವದು ಸುಖವೇ ಮತ್ಯಾನಂದವೇ ಪ

ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಅ.ಪ.

ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು
ಕನಕನ ಚಿತ್ತನಾಗಿ ಗೋಕುಲದಿಂದ ಸ
ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ 1

ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ
ಅಂದೆ ಸುರರೊಳು ಗಣನೆ ಎನ್ನೆ
ಒಂದಕ್ಕೆ ನೂರಾರು ಯಾಗ ಮಾಡಿದ ಫಲ
ತಂದು ಕೊಡುವ ಅಜನಾದಿಕಲ್ಪ ಪರಿಯಂತ2

ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ
ಸಾಗರದಿ ಕೋಟಿ ಸ್ನಾನ ಮಾಡಲು
ಊಧ್ವರೇತಸ್ಥನಾಗಿರ್ದ ಫಲವಕ್ಕೆ
ಪರಿಯಂತ 3

ಸನ್ನುತ ಸಾಧನವನು ಮಾಡಲು
ಸನ್ನುತರ ತೆಗೆದು ಜ್ಞಾನ ಭಕುತಿ ಸಂ
ಪನ್ನವಿರಕುತಿಗೆ ಯತಿಗಾದಿ ಮುಖನಾದ4

ಕರವ ಜೋಡಿಸಿ ನಿಂದು
ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ
ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ 5
***********

No comments:

Post a Comment