Friday 27 December 2019

ಗುರುರಾಜ ರಘೂತ್ತಮ ಗುರುರಾಜ ankita prasannashreenivasa

ಗುರುರಾಜ ರಘೂತ್ತಮ ಗುರುರಾಜ
ಗುರುರಾಜ ನಮೋ ನಮೋ ನಿನ್ನ ಪಾದ
ಸರಸಿಜಯುಗಳದಿ ನಾ ಶರಣು ಅಹ
ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು
ಕರುಣದಿ ಸಲಹೆನ್ನ ದುರಿತಗಳಳಿದು ||ಪ||

ನಿವ್ರ್ಯಾಜ ಕರುಣಿ ರಘುವರ್ಯ ಗುರು
ವರ್ಯ ಸುಮೇಧರ ದಿವ್ಯ ಚಾರು
ತೋಯಜ ಕರದಿಂದ ಉದಯನಾಗಿ
ನಿಗಮ ಸಾಮ್ರಾಜ್ಯ ಅಹ
ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ
ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ ||1||

ಬದರೀಶ ನಿರ್ಣೀತತತ್ವ ಅರ್ಥ
ವಿಸ್ತಾರ ಮಾಡಿದ ಮಧ್ವ ಟೀಕೆ
ಜಯತೀರ್ಥ ಬರೆದ ತದ್ಭಾವ ಪೇಳಿ
ಒದಗಿಸಿದೆಯೊ ಸುಖವ ಅಹ
ಮುದ ಸೌಭಾಗ್ಯ ಸಾಧು ವೈಷ್ಣವತನ
ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ ||2||

ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ
ಧರೆಯಳದವನ ಸೇವಿಸಿ ಗಂಗಾ
ಧರಷಡಾನನ ಇಲ್ಲಿ ವಾಸಿಸುವ ಈ
ಕ್ಷೇತ್ರ ವೃಂದಾವನ ವಾಸಿ ಅಹ
ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ
ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ ||3||

ಸುರವೃಂದ ಶ್ರೇಷ್ಠ ನೀನಹುದು ಎನ್ನ
ಪರಿ ಬಾಧೆಯ ತರಿದು ಸರ್ವ
ಸಿರಿ ಇತ್ತು ಹರಿ
ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ
ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ
ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ ||4||

ರಾಮನೃಕೇಸರಿ ವ್ಯಾಸ ಸತ್ಯ
ಭಾಮ ರುಕ್ಮೀಣಿ ದೇವಿ ಅರಸ ಭೂಮ
ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ
ಭೀಮಹನುಮ ವಂದ್ಯ ಶ್ರೀಶ ಅಹ
ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ’
ರಮೆಯರಸನ ಪ್ರಿಯತಮ ಜೀಯ ||5||
*******

No comments:

Post a Comment