ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ||ಪ||
ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ||೧||
ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ||೨||
ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ ||೩||
***
Satyavantara sangaviralu tirthavetake
Nitya annadanaviralu Bayavu Etake ||pa||
Guruhiriyara ariyadavana arivadetake
Parahitarthakilladavana sariravetake
Hariya puje madadavana janumavetake
Seridavara horeyadantha doreyu Etake ||1||
Matu kelade maletu nadeva makkaletake
Bitanagi odibaruva bantanetake
Priti illade edeyanalikkida utavetake
Sotu hennige hedari nadeyada sugunanetake ||2||
Tanu unnada pararigikkada dhanaviddetake
Mana hinanagi balva manujanetake
Nuna heccu noduvalli iruvudetake
Tanna balagaverasi unnada bagyavetake ||3||
Tanu tannanariyadantha praudhanetake
Snana samdhyanavillada silavetake
J~janavillade nurukala badukaletake
Dhyanadolage krushnanillada tanuviddetake ||4||
Sanj~jeyaritu nadeyadiruva sati iddetake
Binnavaritu nadeyadantha snehavetake
Munna kottu padeyalilla bayasaletake
Chenna adikesavaniralu bere daivavetake ||5||
***
ಯಾತಕೆಯ ಔಚಿತ್ಯ
ಕನಕದಾಸರು ಜೀವನದ ರಹಸ್ಯವನ್ನು ತಿಳಿಸುವವರಾಗಿ ಹೇಗಿದ್ದು ಬಾಳಬೇಕೆಂದು ಮನುಕುಲಕ್ಕೆ ಸಂದೇಶ ನೀಡುವರು. ಮನುಷ್ಯ ಜೀವನದಲ್ಲಿ ಕೆಲವನ್ನು ಹಿಡಿಯಬೇಕು. ಕೆಲವನ್ನು ಬಿಡಬೇಕು. ಆದರೆ ಇದರ ವ್ಯತ್ಯಾಸ ತಿಳಿಯದೆ ಬಳಲುವ ಜೀವರು. ಅದಕ್ಕೇ ದಾಸರು ಕೆಲ ವಿಷಯಗಳ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ಒಂದು ಪಟ್ಟಿಯನ್ನೇ ಕೊಡುವರು. ಕೆಲವನ್ನು ಯಾತಕೆ ಎಂದು ಪ್ರಶ್ನಿಸುವರು. ಇಲ್ಲಿಯ ಧ್ವನಿಯನ್ನು ಗಮನಿಸಬೇಕು.
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ ll ಪ ll
ತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ
ಮಾನಹೀನನಾಗಿ ಬಾಳ್ವ ಮನುಜನ್ಯಾತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕಲ್ಯಾತಕೆ
*ಮಾನಿನಿಯ ತೊರೆದು ಮೇಲೆ ಭೋಗವ್ಯಾತಕೆ ll 1 ll
ಮಾತು ಕೇಳದೆ ಮರೆತು ನಡೆವ ಮಕ್ಕಳ್ಯಾತಕೆ*
ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ
ನೀತಿಯರಿತು ನಡೆಯದಿರುವ ಬಂಟನ್ಯಾತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನ್ಯಾತಕೆ ll 2 ll
ಸನ್ನೆಯರಿತು ನಡೆಯದಿರುವ ಸತಿಯು ಯಾತಕೆ
ಮನ್ನಣಿಯಿಂದ ನಡೆಸದಿರುವ ದೊರೆಯು ಯಾತಕೆ
ಮುನ್ನ ಕೊಟ್ಟು ಪಡೆಯರಿನ್ನು ಬಯಸಲ್ಯಾತಕೆ
ಚನ್ನ ಆದಿಕೇಶವನಲ್ಲದ ದೈವವ್ಯಾತಕೆ ll 3 ll - ಶ್ರೀಕನಕದಾಸರು
ಕನಕರು ಈ ಕೀರ್ತನೆಯಲ್ಲಿ ಜೀವನದಲ್ಲಿ ಮನುಷ್ಯ ಹೇಗಿರಬೇಕು, ಮನುಜರ ನಿತ್ಯಜೀವನದ ನಡುವಳಿಕೆ, ರೀತಿನೀತಿಗಳ ಪಟ್ಟಿಯನ್ನೇ ಕೊಟ್ಟಿರುವರು. ಮನುಷ್ಯ ಹೇಗಿದ್ದು ಎಂತಹ ಸಹವಾಸ ಮಾಡಬೇಕು ಎಂಬುದನ್ನು ಸಯುಕ್ತಿಕವಾಗಿ ಉಪದೇಶಿಸಿರುವರು. ಇಲ್ಲಿ ಪ್ರತಿಸಾಲಿನಲ್ಲಿ ಯೇತಕೆ ಎಂಬುದು ಔಚಿತ್ಯ ಪೂರ್ಣವಾಗಿದೆ. ಇದ್ದರೂ ಇಲ್ಲದಿದ್ದರೂ ಅಷ್ಟೇ ಎಂಬ ಮನೋಭಾವ ಕೂಡದು. ಇಲ್ಲಿ ಒಂದೊಂದು ಮಾತೂ ಅರ್ಥಪೂರ್ಣವಾಗಿದೆ. ಅನುಸರಿಸಿದಲ್ಲಿ ಪರಿಣಾಮಕಾರಿಯಾಗಿರುವುದರಲ್ಲಿ ಸಂದೇಹವಿಲ್ಲ.
ಮನುಷ್ಯ ಇತರ ಪ್ರಾಣಿಗಳಂತೆ ಬದುಕಿ ಇದ್ದು ಸತ್ತರಾಗದು. ಭಗವಂತ ಕೊಟ್ಟ ಈ ದೇಹವನ್ನು ಸಾಧನೆಗಳ ಮೂಲಕ ಸವಿದು, ಪರೋಪಕಾರಿಯಾಗಿ ಬಾಳಬೇಕೆಂದು ಸಂದೇಶ ನೀಡಿದರು. ಕಡೆಗೆ ಆದಿಕೇಶವನೆ ಪರದೈವವೆಂದು ಸಾರಿದರು.
(haridasa hrudaya)
***
No comments:
Post a Comment