Friday 27 December 2019

ಎಂತು ಮರುಳಾದೆ ನಾನೆಂತು ಮರುಳಾದೆ ankita narahari

writer ನರಹರಿ ತೀರ್ಥರು
ರಾಗ : ಆನಂದಭೈರವಿ  ತಾಳ : ಆದಿ

ಎಂತು ಮರುಳಾದೆ ನಾನೆಂತು ಮರುಳಾದೆ  ||ಪ||

ಎಂತು ಮರುಳಾದೆ ಭವದೊಳು ಬಳಲಿದೆ
ಸಂತತ ಪೊರೆ ರಘುಕುಲತಿಲಕ    ||ಅ.ಪ||

ಮಾತಿನಲ್ಲಿ ಹರಿದಾಸನ
ನೀತಿಯಲ್ಲಿ ಪ್ರಭುದಾಸತನ
ಪ್ರೀತಿ ಧನಾದಿ ವಿಷಯದಲ್ಲಿ ನಿ
ರ್ಭೀತಿ ದೈವ ಗುರು ದ್ರೋಹದಲಿ    ||೧||

ಏಕಾಂತದಲ್ಲಿ ಧನದ ಗೋಷ್ಠಿ
ಲೋಕಾಂತದಿ ವೈರಾಗ್ಯದ ಗೋಷ್ಠಿ
ಶ್ರೀಕಾಂತನ ಸೇವೆಗೆ ಅನುಮಾನ
ಭೂಕಾಂತನ ಸೇವೆಗೆ ಸುಮ್ಮಾನ    ||೨||

ಧರ್ಮಕ್ಕೆ ಒಂದು ಕಾಸು ಆ
ಧರ್ಮಕ್ಕೆ ಸಾವಿರಾರು ಹೊನ್ನು
ಧರ್ಮ ಮಾಡಲು ಬೇಸರಿಕೆ ಆ
ಧರ್ಮಮಾಡಲು ಚಚ್ಚರಿಕೆ     ||೩||

ಡೊಂಬನಂತೆ ಬಯಲಿಗೆ ಹರಹಿ
ಡಂಭತನಕೆ ಕರ್ಮವ ಮಾಡಿ
ಅಂಬುಜನಾಭಗೆ ದೂರಾಗಿ
ಕುಂಭೀಪಾತಕಕೆ ಗುರಿಯಾದೆ     ||೪||

ಸತಿಯರ ಬೈದರೆ ನಾ ಬೈಯ್ವೆ
ಶ್ರೀಪತಿಯ ಬೈದರೆ
ಕೇಳುತ ನಗುವೆ
ಮತಿಗೆಟ್ಟು ವಿಷಯಲಂಪಟನಾಗಿ    ||೫||

ಯಾರಿಗಾಗಿ ಧಾವತಿ ಪಡುವೆ ಇ
ನ್ನಾರಿಗೆ ಒಡವೆಯ ಬಚ್ಚಿಡುವೆ
ನಾರಿ ಪುತ್ರ ಮಿತ್ರಾದಿಗಳು
ಯಾರೂ ಬಾರರೊ ಸಂಗಡದಿ    ||೬||

ಭಜಿಸು ಬ್ರಹ್ಮಾದಿ ವಂದಿತ ಹರಿಯ
ತ್ಯಜಿಸು ಕಾಮಾದಿ ದುರ್ವಿಷಯ
ಸುಜನವಂದಿತನಾದ ನರಹರಿಯ
ಭಜಿಸು ಶ್ರೀಶ ಶ್ರೀ ರಘುಪತಿಯ    ||೭||
*********

ಶ್ರೀನರಹರಿ ತೀರ್ಥರ  ಕೃತಿ

ಎಂತು ಮರುಳಾದೆ | ನಾ| ನೆಂತು ಮರುಳಾದೆ
ಎಂತು ಮರುಳಾದೆ | ಭವದೊಳು ಬಳಲಿದೆ| ಸಂತತ ರಘು| ಕುಲತಿಲಕ|

ಮಾತಿನಲ್ಲಿ ಹರಿದಾಸತನ| 
ನೀತಿಯಲ್ಲಿ ಪ್ರಭುದಾಸತನ|
ಪ್ರೀತಿ ಧನಾದಿ ವಿಷಯದಲ್ಲಿ|
|ನಿ|ರ್ಭೀತಿ ದೈವ ಗುರುದ್ರೋಹದಲಿ|

ಏಕಾಂತದಲ್ಲಿ ಧನದ ಗೋಷ್ಠಿ|
ಲೋಕಾಂತದಿ ವೈರಾಗ್ಯದ ಗೋಷ್ಠಿ|
ಶ್ರೀಕಾಂತನ ಸೇವೆಗೆ ಅನುಮಾನ|
ಭೂಕಾಂತನ ಸೇವೆಗೆ ಸುಮ್ಮಾನ|
ಧರ್ಮಕ್ಕೆ ಒಂದು ಕಾಸು ಸಾವಿರ ಹೊನ್ನು
| ಅ|ಧರ್ಮಕ್ಕೆ ಕೋಟಿ ಹೊನ್ನು ಒಂದೇ|
ಕಾಸು ಧರ್ಮ ಮಾಡಲು ಬೇಸರಿಕೆ|
|ಅ|ಧರ್ಮ ಮಾಡಲು ಎಚ್ಚರಿಕೆ|

ಡೊಂಬನಂತೆ ಬಯಲಿಗೆ ಹರಹಿ|
ಡಂಬತನಕೆ ಕರ್ಮವು ಮಾಡಿ |
ಅಂಬುಜನಾಭಗೆ ದೂರಾಗಿ| 
ಕುಂಭೀಪಾಕಕೆ ಗುರಿಯಾದೆ|

ಸತಿಯರ ಬೈದರೆ ನಾ ಬೈಯ್ಯೆ |
ಶ್ರೀಪತಿಯ ಬೈದರೆ ಕೇಳುತ ನಗುವೆ|

ಯಾರಿಗಾಗಿ ಧಾವತಿ ಪಡುವೆ |
|ಇ|ನ್ನಾರಿಗೆ ಒಡವೆಯ ಬಚ್ಚಿಡುವೆ|
ನಾರಿಪುತ್ರ ಮಿತ್ರಾದಿಗಳು|
ಯಾರೂ ಬಾರರೋ ಸಂಗಡದಿ|

ಭಜಿಸು ಬ್ರಹ್ಮಾದಿ ವಂದಿತ ಹರಿಯ|
ತ್ಯಜಿಸು ಕಾಮಾದಿ ದುರ್ವಿಷಯ|
ಸುಜನವಂದಿತನಾದ 
🌹ನರಹರಿ🌹ಯ |
ಭಜಿಸು ಶ್ರೀಶ ಶ್ರೀ ರಘುಪತಿಯ||

*********

No comments:

Post a Comment