Friday 27 December 2019

ಬಂದದ್ದೆಲ್ಲ ಬರಲೀ ರಾಘವೇಂದ್ರರ ದಯವಿರಲಿ ankita abhinava janardhana vittala

ಬ೦ದದ್ದೆಲ್ಲ ಬರಲೀ – ರಾಘವೇ೦ದ್ರರ ದಯವಿರಲಿ        || ಪ ||
ಹಿ೦ದೆ ಬಹುಜನುಮದಿ೦ದ ಮಾಡಿದಘ
ಸ೦ದಣಿ ಕಳೆವಗಿದೊ೦ದರಿದೇನೈ                     || ಅ ||

ದಾಶರಥಿವ್ಯಾಸ – ನರಕೇಸರಿ ಶ್ರೀ ಯಾದವೇಶ
ಈಸುಮೂರ್ತಿಗಳುಪಾಸ-ನಯಲೇಸಾಗಿ ಮಾಳ್ಪ ವಿಶೇಷ
ದಾಸಜನರ ಅಭಿಲಾಷೆ ಪೂರ್ತಿಸುವ
ಶ್ರೀಸುಧೀ೦ದ್ರಯತೀಶರ ದಯವಿರೆ                        || ೧ ||

ಧರೆ ಕಳಕೊ೦ಡವರು-ಉಡಲು ಅರಿವೆ ಇಲ್ಲದವರು
ತರಳಸ೦ಪದರಹಿತರು-ಮಹದುರುತರ ಜ್ಞಾನಿಭಕುತರು
ತೆರಳಿಬ೦ದು ಸ೦ದರುಶನ ಮಾಡಲು
ಕರೆದೀಪ್ಸಿತ ಕೊಡುವರ ದಯವಿರುತಿರೆ               || ೨ ||

ವಾತಪಿತ್ತ ಕಫಶೀತಾ-ಸನ್ನಿಪಾತಕಜ್ವರ ಪ್ರಖ್ಯಾತ
ಭೂತಪ್ರೇತಭಯವ್ರಾತ-ಕಳೆವಾತುರರಿಗೆ ಫಲದಾತ
ನಾಥ ಅಭಿನವಜನಾರ್ಧನವಿಠ್ಠಲನ
ಪ್ರೀತಿ ದೂತನ ದಯ ಅತಿಶಯವಾಗಿರೆ                  || ೩ ||
********

No comments:

Post a Comment