Tuesday, 13 April 2021

ರಾಮ ರಾಮೆನ್ನಿರೊ ಸೀತಾಪತಿ ರಾಮ ankita lakshminarayana

ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ll ಪ ll


ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲು

ಭಂಗವ ಪಡುವುದ್ಯಾಕೆ

ಮಂಗಲದಾತ ನರಸಿಂಗನ ನಾಮವ

ಹಿಂಗದೆ ನೆನೆದರಿಷ್ಟಂಗಳ ಕೊಡುವ ll 1 ll


ಉಪವಾಸ ಮಾಡಲ್ಯಾಕೆ ಕಪಟದೊಳು

ಗುಪಿತದಿ ಕುಳ್ಳಲ್ಯಾಕೆ

ಉಪಮೆರಹಿತ ಶ್ರೀಪತಿ ಕೃಷ್ಣರಾಯನ 

ಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ ll 2 ll


ಧ್ರುವನು ಸದ್ಗತಿ ಪಡೆದ ಕರುಣದಿಂದ

ಪವಮಾನಿಗೆ ಒಲಿದ

ಭುವನ ಈರಡಿ ಮಾಡಿ ಬಲಿಯನ್ನು ಸಲಹಿದ

ಬವರದೊಳಗೆ ದಾನವರನ್ನು ಮಡುಹಿದ ll 3 ll


ಯಾತ್ರೆಗೆ ಪೊಗಲ್ಯಾಕೋ ಕಾವಡಿ ಪೊತ್ತು

ತೀರ್ಥಸ್ನಾನಗಳ್ಯಾತಕೋ 

ಕರ್ತು ಮಾಧವ ಶತಪತ್ರನಾಭನ ಸಂ-

ಕೀರ್ತನಾದಿಗಳೆ ಪರತ್ರಸಾಧನವಲ್ಲೊ ll 4 ll


ಭೂರಿಯಾಯಾಸವ್ಯಾಕೋ ಬರಿದೆ ಸಂ-

ಸಾರವ ನಂಬಲ್ಯಾಕೋ

ಮಾರಾರಿಸಖ ಲಕ್ಷ್ಮೀನಾರಾಯಣನನ್ನು

ಸೇರಿ ಭಜಿಪರ ಉದ್ಧಾರಮಾಡುವ ಶ್ರೀ

***


No comments:

Post a Comment