Friday 24 December 2021

ವೀರ ಘೋಷಣೆ others VEERA GHOSHANE rss

 


RSS song  


ವೀರ ಘೋಷಣೆ ವೀರಘರ್ಜನೆ ಗೈಯೆ ವಿಜಯೋಪಾಸನೆ

ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಭೋಧನೆ ||ಪ||


ಒಬ್ಬರಾಗುತ ಒಬ್ಬದೇವರು ಹುಟ್ಟಿಬಂದರು ಬಂದರೂ

ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರೂ

ಗೊಡ್ಡು ಮನದಲಿ ಅಡ್ಡ್ಬಿದ್ದೆವು ನಮ್ಮಡಿಯ ಹಿಂದಿಟ್ಟೆವು

ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು ||೧||


ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ?

ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ?

ಪೂಜೆ ಏತಕೆ ಪಠನವೇತಕೆ ಗೈದವೆಂಬುದ ಬಲ್ಲೆವೇ?

ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? ||೨||


ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ

ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ

ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ

ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ! ||೩||


ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ

ಮೈಯರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ

ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ

ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ ||೪||

***

vIra GOShaNe vIraGarjane gaiye vijayOpAsane

Sakti illade muktiyillavu idu caritreya BOdhane ||pa||


obbarAguta obbadEvaru huTTibaMdaru baMdarU

sAdhupuruSharu vIrapuruSharu baMdu hOdaru hOdarU

goDDu manadali aDDbiddevu nammaDiya hiMdiTTevu

hUvuhaNNanu koTTu avaranu muMde sAgisi biTTevu ||1||


uddharEdAtmanAtmAnam nAvE paThisidudallavE?

kOvi kattiyaniTTu summane nAve pUjisalillavE?

pUje Etake paThanavEtake gaidaveMbuda ballevE?

SastravEtake SAstravEtake eMbudanu maretillavE? ||2||


mUru sAgara nUru maMdira daivasAsiraviddare

gaMgeyiddare siMdhuviddare girihimAlayaviddare

vEdaviddare BUmiyiddare GanaparaMpareyiddare

Enu sArthaka maneya janare malagi nidrisuttidare! ||3||


mAtRuBUmiya makkaLAdare Iga nidrisalolliri

maiyaraktavu Suddhaviddare Iga tOrisaballiri

aDiya muMdiDe svargavenniri gaDiyanuLisalu dhAvisi

kaDanALiri naBavanaLeyiri yaMtrataMtrava nirmisi ||4||

***


ವೀರ ಘೋಷಣೆ ವೀರಘರ್ಜನೆ ಗೈಯೆ ವಿಜಯೋಪಾಸನೆ

ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಭೋಧನೆ ||ಪ||


ಒಬ್ಬರಾಗುತ ಒಬ್ಬದೇವರು ಹುಟ್ಟಿಬಂದರು ಬಂದರೂ

ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರೂ

ಗೊಡ್ಡು ಮನದಲಿ ಅಡ್ಡ್ಬಿದ್ದೆವು ನಮ್ಮಡಿಯ ಹಿಂದಿಟ್ಟೆವು

ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು ||೧||


ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ?

ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ?

ಪೂಜೆ ಏತಕೆ ಪಠನವೇತಕೆ ಗೈದವೆಂಬುದ ಬಲ್ಲೆವೇ?

ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? ||೨||


ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ

ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ

ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ

ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ! ||೩||


ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ

ಮೈಯರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ

ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ

ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ ||೪||

***


No comments:

Post a Comment