Wednesday 1 September 2021

ನ್ಯಾಯವೇನೈ ಇದು ಮೂಢ ಜಯ ಬೇಡುವೆ ಗಾಢ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ನ್ಯಾಯವೇನೈ ಇದು ಮೂಢ

ಜಯ ಬೇಡುವೆ ಗಾಢ ಪ


ಜನರನೆರಹಿಕೊಂಡು ಕಪಟ

ವಿನಯಗಳನೆ ತೋರುತಲಿ

ವನಜನಾಭನ ಗುಣಗಳ ಹೇಳಿ

ಧನವ ತರುವುದಿದು ಮೂಢ 1


ಪರಮಪದನರುಹಿದ

ಗುರು ಸಮೀರ ಶಾಸ್ತ್ರವನು

ಪರಧನ ಬಯಸಿ ಅವರಿ

ಗರುಹಿಸುವುದಿದು ಮೂಢ 2


ಈಶನುತನಾದ ನಮ್ಮ

ವಾಸುದೇವವಿಠ್ಠಲನ

ದಾಸರ ದಾಸ್ಯವ ಬಿಟ್ಟು ನರರ

ದಾಸನೆನಿಸೋದಿದು ಮೂಢ3

**


No comments:

Post a Comment