Wednesday 1 September 2021

ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ

ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ಪ


ನಿತ್ಯ ಮುಕ್ತ ಪೂರ್ಣ ಕಾಮ ಒಂದಕು ಸಿಲುಕದ

ಮತ್ತೆ ಇದ್ದ ನಿನ್ನ ತನು ದೀನರ ತೋರಿ

ಹತ್ತು ಜನುಮವ ಕೊಟ್ಟು ಭಕ್ತ ಜನರ ಬಲು

ಕೃತ್ಯ ನಿಮಿತ್ಯ ಕೊಡಿಸ್ಯಾಡಿಸಿದನರಿಯ 1

ಒಂದಕೂ ಸಿಲುಕದಾ ನಿನ್ನ ವತ್ಸದ ದಾವು

ಬಂಧದಿ ಬಿಗಿಸಿತೀ ಗೋಪಿಯ ಕೈಯ

ವೃಂದಾರಕರ ಸ್ತುತಿಗೊಶವಲ್ಲದವನ ಗೋಪ

ಮಂದಿಯ ದೂರಿನ ಪಾತ್ರನ್ನ ಮಾಡಿತು 2


ಪೇಳಿಕೊಂಬಿಯೊ ಲೋಕದೊಡೆಯನು ನಾನೆಂದು

ಊಳಿಗತನ ನಿನ್ನ ಕೈಯ ಮಾಡಿಸಿತಯ್ಯ

ಕೇಳೊ ಭಕುತರಿನ್ನು ಏನಾಡಿದರನ್ನ

ತಾಳಬೇಕಾಯಿತೋ ವಾಸುದೇವವಿಠಲ 3

***


No comments:

Post a Comment