Wednesday 1 September 2021

ನಾನೇನು ಕೊಡಲಿ ನಾಗಶಯನನಿಗೆ ಹದಿನಾಲ್ಕು ಲೋಕಗಳ ಆಳುವೋ ಅರಸಗೆ ankita kamalesha

 ಸಾಹಿತ್ಯ-ಆನಂದದಾಸ

ನಾನೇನು ಕೊಡಲಿ ನಾಗಶಯನನಿಗೆ ।

ಹದಿನಾಲ್ಕು ಲೋಕಗಳ ಆಳುವೋ ಅರಸಗೆ ॥


ಸರ್ಪಶಯನನಿಗೆ ಸರ್ಪವೇಣಿಯ ಕೊಟ್ಟ ಸಾಗರರಾಜನು ಧನ್ಯನಾದನು ।

ಸಾಸಿರನಾಮದ ಶ್ರೀರಾಮಚಂದ್ರಗೆ ಸ್ವಾದಿಷ್ಟ ಫಲ ಕೊಟ್ಟ ಶಬರಿ ಧನ್ಯಳು ॥೧॥


ಆದಿಮೂರುತಿಗೆ ಅಕಳಂಕಚರಿತಗೆ ಅವಲಕ್ಕಿಯನು ಕೊಟ್ಟ ಅಣ್ಣ ಸುದಾಮನು ।

ಅವನೇ ತನ್ನವನೆಂದು ಅರಳು ಮಲ್ಲಿಗೆ ಕೊಟ್ಟ ಅಬಲೆ ರಾಧೆಯು ಅತಿ ಧನ್ಯಳು ॥೨॥


ಅಸುರಸಂಹಾರಗೆ ಎಸೆಳ್ಹಸು ಕೂಸಿಗೆ ಹಾಲು ಕೊಟ್ಟ ಯಶೋದೆ ಧನ್ಯಳು ।

ಕಮಲೇಶ ಕೃಷ್ಣಗೆ ಹೃತ್ಕಮಲವ ಕೊಟ್ಟ ಕಮಲಾಸನೆಯು ಅತಿ ಧನ್ಯಳು ॥೩॥

****


No comments:

Post a Comment