Sunday 26 September 2021

ಹ್ಯಾಗಿದ್ದರೂ ಸುಖವೇ ಜ್ಞಾನಿಯಾದವಗೆ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 

ಹ್ಯಾಗಿದ್ದರೂ ಸುಖವೇ ಜ್ಞಾನಿಯಾದವಗೆ 

ನಾಗಶಯನನಂಘ್ರಿ ನಳಿನ ನಂಬಿರುವಗೆ 

ಅ.ಪ

ಬಂಧುಬಳಗವೆಲ್ಲ ಸಂದಣಿಯಾಗಿದ್ದರು

ಹಿಂದುಮುಂದಿಲ್ಲದೆ ತಾನೊಬ್ಬನಾದರು

 1

ಹೊನ್ನು ಹೆಣ್ಣು ಮಣ್ಣು ಹೊಂದಿಕೊಂಡಿದ್ದರು

ಅನ್ನಕಿಲ್ಲದೆ ತಾ ನರಳುವಂತಾದರು 

2

ಬೇಡದೆ ಸಕಲೈಶ್ವರ್ಯ ತಾನೆ ಬಂದರು

ಬೇಡಿದರೊ ಹೊಟ್ಟೆ ತುಂಬ ದೊರಕದಿದ್ದರು 

3

ಯೋಗ್ಯನೆನ್ನುತ ಜನರು ಶ್ಲಾಘ್ಯವ ಮಾಡಿದರು

ಭಾಗ್ಯಹೀನನಿವನೆಂದು ಬೈಯ್ಯತಲಿದ್ದರು 

4

ಕೊಟ್ಟಷ್ಟರಲ್ಲೆ ತೃಪ್ತಿಪಟ್ಟು ಶ್ರೀ ಗುರುರಾಮ-

ವಿಠ್ಠಲನ ಮನಮುಟ್ಟ ಭಜಿಸುವಗೆ  5

***


No comments:

Post a Comment